ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ರಂಗಾಯಣದ ನಾಲ್ಕೂ ವಿಭಾಗಗಳ ನಿರ್ದೇಶಕರ ನೇಮಕಾತಿಯನ್ನು, ಬಿ.ಎಸ್. ಯಡಿಯೂರಪ್ಪ ಅವರುಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ರದ್ದುಪಡಿಸಿದ್ದರು. ಧಾರವಾಡ ರಂಗಾಯಣಕ್ಕೆ ರಮೇಶ ಪರವಿ ನಾಯ್ಕರ್, ಶಿವಮೊಗ್ಗ ರಂಗಾಯಣಕ್ಕೆ ಸಂದೇಶ ಜವಳಿ, ಕಲಬುರ್ಗಿ ರಂಗಾಯಣಕ್ಕೆ ಪ್ರಭಾಕರ ಜೋಶಿ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.