ಬೆಂಗಳೂರು: ಅನನ್ಯ ಪ್ರಕಾಶನದ ವತಿಯಿಂದ ನೀಡಲಾಗುವ ಈ ಸಾಲಿನ ಕೆ.ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿಗೆ (ಅನನ್ಯ ಪ್ರಶಸ್ತಿ) ಗದಗ ಜಿಲ್ಲೆಯ ರಾಜೂರ ಗ್ರಾಮದ ಟಿ.ಎಸ್.ಗೊರವರ ಅವರ ‘ಮಲ್ಲಿಗೆ ಹೂವಿನ ಸಖ’ ಕಥಾ ಸಂಕಲನ ಆಯ್ಕೆಯಾಗಿದೆ.
ಪ್ರಶಸ್ತಿ ₹5 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಇದೇ 25ರಂದು ತುಮಕೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.