ತೀರ್ಥಹಳ್ಳಿ: ಇಂದೋರಿನ ಮಾಲ್ವಾ ಫೋಟೊ ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ತಾಲ್ಲೂಕಿನ ವಿನಾಯಕ ಗುಜ್ಜಾರ್ ಅವರ ‘ಹೂಪೋ ತಾಯಿ ಹಕ್ಕಿಯ ಆರೈಕೆ’ ಛಾಯಾಚಿತ್ರಕ್ಕೆ ಫೆಡರೇಷನ್ ಆಫ್ ಇಂಡಿಯನ್ ಪೋಟೋಗ್ರಫಿ (ಎಫ್ಐಪಿ) ಚಿನ್ನದ ಪದಕ ಲಭಿಸಿದೆ.
ಇದೇ ಛಾಯಾಚಿತ್ರಕ್ಕೆ ಸ್ವಾನ್ ನ್ಯಾಷನಲ್ ಸಲೂನ್ ಸ್ಪರ್ಧೆಯಲ್ಲೂ ಕಂಚಿನ ಪದಕ ದೊರೆತಿದೆ.