ಕಂಪ್ಲಿ (ಬಳ್ಳಾರಿ ಜಿಲ್ಲೆ): ಇಬ್ಬರು ಮಕ್ಕಳನ್ನು ಬಲಿ ಪಡೆದ ಚಿರತೆಗಳ ಹಾವಳಿ ಮುಂದುವರಿದಿದ್ದು, ಎರಡನೇ ಚಿರತೆ ತಾಲ್ಲೂಕಿನ ಸೋಮಲಾಪುರ ಗ್ರಾಮದ ಎರದಮಟ್ಟಿ ಪ್ರದೇಶದ ಮನೆ ಬಳಿ ಬೋನಿನಲ್ಲಿ ಶುಕ್ರವಾರ ಸೆರೆಯಾಗಿದೆ. ಅದರ ಬೆನ್ನಿಗೇ ಮೂರನೇ ಚಿರತೆಯೂ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ತಾಲ್ಲೂಕಿನ ದೇವಲಾಪುರ ಕಾನಮಟ್ಟಿ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 6.30ಕ್ಕೆ ಮತ್ತು ಮಧ್ಯಾಹ್ನ 1ಕ್ಕೆ ಚಿರತೆ ಕಾಣಿಸಿಕೊಂಡಿದ್ದು, ಕುರಿಗಾಹಿ ಯುವಕನ ಮೇಲೆ ದಾಳಿಗೆ ಯತ್ನಿಸಿತು. ರೈತ ಹಾಗೂ ಮಹಿಳೆಯು ಚಿರತೆ ಕಂಡು ಓಡುವಾಗ ಬಿದ್ದು ಗಾಯಗೊಂಡರು.