‘ಬರಹ ನಮ್ಮ ಅಲೆದಾಟದಲ್ಲಿ ಸಿಗುವ ಖುಷಿ. ಬರಹವು ಆತ್ಮ, ದೇಹಕ್ಕೆ ಸಿಗುವ ಖುಷಿ. ಬರವಣಿಗೆಯೆನ್ನುವುದು ಜಾದೂ ಇದ್ದ ಹಾಗೆ. ಅದಕ್ಕೆ ಬರಹಗಾರ, ಓದುಗರು ಯಾರೂ ಕಾರಣರಲ್ಲ. ಸಾಹಿತಿಗಳು ಈ ಕ್ಷೇತ್ರದಲ್ಲಿ ಜಾದೂಗಾರನ ಪಾತ್ರ ನಿರ್ವಹಿಸುತ್ತಾರೆ. ನಾವು ಕಂಡ ಪ್ರಪಂಚವನ್ನು ಯಾವುದೇ ಮುಚ್ಚುಮರೆಯಿಲ್ಲದೇ, ಯಾವುದೇ ತಿರುವುಗಳಿಲ್ಲದೇ ಅದನ್ನ ಲವಲವಿಕೆಯಿಂದ ಬಿಚ್ಚಿಡುತ್ತಾ ಹೋದರೆ ಒಳ್ಳೆಯ ಬರಹಗಾರರಾಗಬಹುದು’ ಎಂದು ಹೇಳಿದರು.