ಇವುಗಳಲ್ಲಿ ಕೋಳಿಗಳ ಜತೆಗೆ ಗೌಜುಲಕ್ಕಿ, ಗಿಳಿ, ಪಾರಿವಾಳಗಳು ಸೇರಿದಂತೆ ಇತರೆ ಸಾಕು ಪಕ್ಷಿಗಳೂ ಇವೆ. ಇವುಗಳನ್ನು ಕೊಲ್ಲಲು ಜಿಲ್ಲಾಡಳಿತವು 5 ಮಂದಿ ಸದಸ್ಯರಿರುವ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ರಚಿಸಿ, ಪ್ರತಿ ತಂಡಕ್ಕೆ ಸಾವಿರ ಪಕ್ಷಿಗಳನ್ನು ಕೊಲ್ಲುವ ಗುರಿ ನೀಡಿದೆ. ಈಗಾಗಲೇ ಕಾರ್ಯಾಚರಣೆ ಆರಂಭವಾಗಿದ್ದು, ಸಾವಿರಾರು ಪಕ್ಷಿಗಳನ್ನು ಕೊಂದು ಆಳವಾದ ಗುಂಡಿ ತೆಗೆದು ಹೂಳಲಾಗುತ್ತಿದೆ.