‘ಮಧ್ಯಾಹ್ನ 2.30ರಿಂದ 2.45 ಗಂಟೆ ಸಮಯದಲ್ಲಿ ಸ್ಫೋಟ ಸಂಭವಿಸಿರುವುದಾಗಿ ಸಿಬ್ಬಂದಿ ಹೇಳುತ್ತಿದ್ದಾರೆ. ವೈಜ್ಞಾನಿಕ ಅಧಿಕಾರಿಗಳಾದ ಶ್ರೀನಾಥ್, ನವ್ಯಾ, ವಿಶ್ವನಾಥ್, ವಿಷ್ಣುವಲ್ಲಭ್, ಬಸವಪ್ರಭು, ಮಂಜುನಾಥ್, ದಲಾಯತ್ ಅಂತೋನಿ ಪ್ರಭು ಎಂಬುವರಿಗೆ ಗಾಯಗಳಾಗಿವೆ. ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಹೇಳಿದರು.