ತಾಲ್ಲೂಕಿನ ಕೆರೆಕೊಪ್ಪದಲ್ಲಿ ಭಾನುವಾರ ಆಯೋಜಿಸಿದ್ದ, ತಮ್ಮದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಕ್ಷಗಾನವನ್ನು ಮನರಂಜನೆ ದೃಷ್ಟಿಯಿಂದ ನೋಡದೇ, ಒಳ್ಳೆಯ ಮನಃಸ್ಥಿತಿಯಿಂದ ಆರಾಧಿಸಬೇಕು. ಜನರಲ್ಲಿ ವಿಶ್ವಾಸ ಹುಟ್ಟಿಸುವ, ಮಾನಸಿಕ ನೆಮ್ಮದಿ ನೀಡುವ ಗುಣಗಳಿರುವ ಯಕ್ಷಗಾನ ವಿಶ್ವವ್ಯಾಪಿ ಆಗಬೇಕು. ಈ ಕಲೆಯನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿಯೇ ಪಠ್ಯಕ್ರಮದಲ್ಲಿ ಅಳವಡಿಸಬೇಕು. ವ್ಯವಸ್ಥಿತ ಬೋಧನಾ ಕ್ರಮದ ಮೂಲಕ ನಾಡಿನ ಮೂಲೆಮೂಲೆಗೆ ತಲುಪಿಸಬೇಕು ಎಂದರು.