ಸ್ಥಾನಮಾನ ಶಾಶ್ವತವಲ್ಲ. ಅಧಿಕಾರದ ಗದ್ದುಗೆ ಏರಲು ಪಕ್ಷಬೇಕು. ಅಧಿಕಾರದಲ್ಲಿ ಇದ್ದಾಗ ಪಕ್ಷದ ಜತೆ ಅವರು ಹೊಂದಿರುವ ಸಂಬಂಧವೂ ಮುಖ್ಯ. ಸಂಘಟನೆ ಮೀರಿ ಹೋದವರು ಉದ್ದಾರವಾಗಲು ಸಾಧ್ಯವಿಲ್ಲ. ಪಕ್ಷ ಬೆಳೆದರೆ ಎಲ್ಲರೂ ಬೆಳೆಯುತ್ತೇವೆ. ಇದು ತಮಗೂ ಸೇರಿದಂತೆ ಕುಮರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಗೂ ಅನ್ವಯಿಸುತ್ತದೆ. ಅಧಿಕಾರದಲ್ಲಿ ಇದ್ದಾಗ ಪಕ್ಷ ದ್ರೋಹಿಗಳನ್ನು ಬೆಂಬಲಿಸಬಾರದು. ನಿಷ್ಠರಿಗೆ ಮನ್ನಣೆ ನೀಡಬೇಕು. ಏನುಬೇಕಾದರೂ ಮಾಡಬಹುದು ಎಂದು ಕುತಂತ್ರ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಸಿದ್ದರಾಮಯ್ಯ ಉದಾಹರಣೆ. ಅವರು ಕೆಳಗೆ ಬಿದಿದ್ದಾರೆ ಎಂದು ಕಲ್ಲು ಹೊಡೆಯುವುದಿಲ್ಲ ಎಂದು ಛೇಡಿಸಿದರು.