ಈ ಸಭೆಗೆ ಹಾಜರಾಗಲು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಅನೀಸ್ ರಾಜ್ ಕಳುಹಿಸಿದ್ದ ಪತ್ರಕ್ಕೆ ಉತ್ತರಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ಎಚ್.ಎಂ.ರೇಣುಕ ಪ್ರಸನ್ನ, ‘ನಾವು ಎತ್ತಿರುವ ಪ್ರಶ್ನೆಗೆ ಸಮಿತಿ ಇದುವರೆಗೆ ಉತ್ತರ ನೀಡದಿರುವುದರಿಂದ ಸಭೆಗೆ ಬಂದು ಮೌಖಿಕವಾಗಿ ತಿಳಿಸುವಂತಹ ಪ್ರಮೇಯ ಉದ್ಭವಿಸುವುದಿಲ್ಲ’ ಎಂದಿದ್ದಾರೆ.