ಕಳೆದ ಆರೇಳು ತಿಂಗಳುಗಳಿಂದ ಕ್ರಾಂತಿ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು ಆದರೆ ಈ ಬಜೆಟ್ನಲ್ಲಿ ಏನು ಇಲ್ಲ, ಕೇವಲ ಹಾಸನಕ್ಕೆ ಸೀಮಿತವಾಗಿದ್ದು ಈ ಬಜೆಟ್ ಮೇಲೆ ರೇವಣ್ಣ ಅವರ ಪ್ರಭಾವ ಹೆಚ್ಚಾಗಿದೆ. ಇದು ಡೋಂಗಿ ಬಜೆಟ್ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.