<p><strong>ಸಾಲಿಗ್ರಾಮ (ಮೈಸೂರು):</strong> ಕೆ.ಆರ್.ನಗರ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಬಸವ (ಗೂಳಿ) ಕಾಲಿಗೆ ಆಗಿರುವ ಗಾಯದಿಂದ ನರಳುತ್ತ ಗ್ರಾಮದ ಕಾಳಮ್ಮನ ದೇಗುಲದ ಮುಂಭಾಗ ನರಳುತ್ತಿರುವುದು ಸ್ಥಳೀಯರ ಕರುಳು ಹಿಂಡುತ್ತಿದೆ.</p>.<p>ಬಸವ ಹಲವು ವರ್ಷಗಳಿಂದ ಇಲ್ಲಿ ಬೀಡು ಬಿಟ್ಟಿದೆ. ಗ್ರಾಮಸ್ದರ ಪಾಲಿಗೆ ದೇವರಂತಿದೆ. ಮೂರು ದಿನಗಳ ಹಿಂದೆ ಆಕಸ್ಮಿಕವಾಗಿ ಬಿದ್ದು ತನ್ನ ಕಾಲು ಮುರಿದುಕೊಂಡಿದೆ.</p>.<p><strong>ದರ್ಶನ್ಗೂ ಬಸವನಿಗೂ ನಂಟು!:</strong> ಈ ಬಸವನಿಗೂ ನಟ ದರ್ಶನ್ ತೂಗುದೀಪ ಅವರಿಗೂ ನಂಟಿರುವುದು ವಿಶೇಷ. ಕಳೆದ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಸುಮಲತಾ ಪರ ದರ್ಶನ್ ಪ್ರಚಾರ ಕೈಗೊಂಡಿದ್ದರು.</p>.<p>ಆಗ ಗ್ರಾಮದಲ್ಲಿ ಮೆರವಣಿಗೆ ಹೋಗುತ್ತಿದ್ದ ವೇಳೆ ಬಸವ ರಸ್ತೆ ಮಧ್ಯೆ ನಿಂತು ಗುಟುರು ಹಾಕಿತ್ತು. ಬಸವನಿಗೆ ಹೆದರಿದ್ದ ಜನರು ಓಡಿದ್ದರು. ಇದನ್ನು ಕಂಡ ದರ್ಶನ್, ಬಸವನ ಬಳಿ ತೆರಳಿ ಮೈ ಸವರಿ ಸಮಾಧಾನಪಡಿಸಿದ್ದು, ಶಾಂತವಾಗಿತ್ತು.</p>.<p>ಸದ್ಯ, ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದರೂ, ಸ್ಪಂದಿಸುತ್ತಿಲ್ಲ. ದರ್ಶನ್ ಬಂದರೆ ಬಸವ ಸ್ಪಂದಿಸುತ್ತದೆ ಎನ್ನುವುದು ಗ್ರಾಮಸ್ಥರ ನಂಬಿಕೆ.ಅವರು ಗ್ರಾಮಕ್ಕೆ ಬರಬೇಕು. ಅದರ ಜೀವದ ಹೊಣೆ ಅವರ ಮೇಲಿದೆ’ ಎನ್ನುತ್ತಾರೆ ಗ್ರಾಮಸ್ಥರು.</p>.<p>‘ಬಸವನ ಆರೋಗ್ಯದಲ್ಲಿ ಚೇತರಿಕೆ ಕಾಣಲು ದರ್ಶನ್ ಬರಬೇಕು. ಆಗಲೇ, ಗ್ರಾಮಸ್ಥರಿಗೂ ನೆಮ್ಮದಿ‘ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಲಿಗ್ರಾಮ (ಮೈಸೂರು):</strong> ಕೆ.ಆರ್.ನಗರ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಬಸವ (ಗೂಳಿ) ಕಾಲಿಗೆ ಆಗಿರುವ ಗಾಯದಿಂದ ನರಳುತ್ತ ಗ್ರಾಮದ ಕಾಳಮ್ಮನ ದೇಗುಲದ ಮುಂಭಾಗ ನರಳುತ್ತಿರುವುದು ಸ್ಥಳೀಯರ ಕರುಳು ಹಿಂಡುತ್ತಿದೆ.</p>.<p>ಬಸವ ಹಲವು ವರ್ಷಗಳಿಂದ ಇಲ್ಲಿ ಬೀಡು ಬಿಟ್ಟಿದೆ. ಗ್ರಾಮಸ್ದರ ಪಾಲಿಗೆ ದೇವರಂತಿದೆ. ಮೂರು ದಿನಗಳ ಹಿಂದೆ ಆಕಸ್ಮಿಕವಾಗಿ ಬಿದ್ದು ತನ್ನ ಕಾಲು ಮುರಿದುಕೊಂಡಿದೆ.</p>.<p><strong>ದರ್ಶನ್ಗೂ ಬಸವನಿಗೂ ನಂಟು!:</strong> ಈ ಬಸವನಿಗೂ ನಟ ದರ್ಶನ್ ತೂಗುದೀಪ ಅವರಿಗೂ ನಂಟಿರುವುದು ವಿಶೇಷ. ಕಳೆದ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಸುಮಲತಾ ಪರ ದರ್ಶನ್ ಪ್ರಚಾರ ಕೈಗೊಂಡಿದ್ದರು.</p>.<p>ಆಗ ಗ್ರಾಮದಲ್ಲಿ ಮೆರವಣಿಗೆ ಹೋಗುತ್ತಿದ್ದ ವೇಳೆ ಬಸವ ರಸ್ತೆ ಮಧ್ಯೆ ನಿಂತು ಗುಟುರು ಹಾಕಿತ್ತು. ಬಸವನಿಗೆ ಹೆದರಿದ್ದ ಜನರು ಓಡಿದ್ದರು. ಇದನ್ನು ಕಂಡ ದರ್ಶನ್, ಬಸವನ ಬಳಿ ತೆರಳಿ ಮೈ ಸವರಿ ಸಮಾಧಾನಪಡಿಸಿದ್ದು, ಶಾಂತವಾಗಿತ್ತು.</p>.<p>ಸದ್ಯ, ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದರೂ, ಸ್ಪಂದಿಸುತ್ತಿಲ್ಲ. ದರ್ಶನ್ ಬಂದರೆ ಬಸವ ಸ್ಪಂದಿಸುತ್ತದೆ ಎನ್ನುವುದು ಗ್ರಾಮಸ್ಥರ ನಂಬಿಕೆ.ಅವರು ಗ್ರಾಮಕ್ಕೆ ಬರಬೇಕು. ಅದರ ಜೀವದ ಹೊಣೆ ಅವರ ಮೇಲಿದೆ’ ಎನ್ನುತ್ತಾರೆ ಗ್ರಾಮಸ್ಥರು.</p>.<p>‘ಬಸವನ ಆರೋಗ್ಯದಲ್ಲಿ ಚೇತರಿಕೆ ಕಾಣಲು ದರ್ಶನ್ ಬರಬೇಕು. ಆಗಲೇ, ಗ್ರಾಮಸ್ಥರಿಗೂ ನೆಮ್ಮದಿ‘ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>