ಬೆಂಗಳೂರು ಹೊರವಲಯದ 4 ಶಾಲೆಗಳ ಮಕ್ಕಳಿಗೆ ಸಿರಿಧಾನ್ಯ ಬಳಸಿ ತಯಾರಿಸಿದ ವಿವಿಧ ಖಾದ್ಯಗಳನ್ನು ಮೂರು ತಿಂಗಳ ಕಾಲ ಉಣಿಸಲಾಯಿತು. ಸಾಮಾನ್ಯ ಬಿಸಿಯೂಟ ಸೇವಿಸುವ ಗುಂಪಿನ ಮಕ್ಕಳಿಗೆ ಹೋಲಿಸಿದರೆ, ಸಿರಿಧಾನ್ಯಯುಕ್ತ ಬಿಸಿಯೂಟ ಸೇವಿಸಿದ ಮಕ್ಕಳಲ್ಲಿ ಎರಡು ಮುಖ್ಯ ಅಂಶಗಳು ಕಂಡುಬಂದಿವೆ. ಮಕ್ಕಳ ಕುಂಠಿತ ಬೆಳವಣಿಗೆಗೆಸಿರಿಧಾನ್ಯದ ಆಹಾರಗಳು ತಡೆದಿವೆ. ಮಕ್ಕಳ ತೂಕಕ್ಕೆ ತಕ್ಕ ಎತ್ತರ ಅನುಪಾತದಲ್ಲಿ (ಬಾಡಿ ಮಾಸ್ ಇಂಡೆಕ್ಸ್– ಬಿಎಂಐ) ಸುಧಾರಣೆ ಕಂಡುಬಂದಿದೆ. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿ ಸಿರಿಧಾನ್ಯ ಖಾದ್ಯಗಳನ್ನು ಪರಿಚಯಿಸುವುದರಿಂದ ಶಾಲೆಗೆ ಹೋಗುವ ಮಕ್ಕಳ ಪೌಷ್ಟಿಕತೆಯ ಮಟ್ಟ ಗಣನೀಯವಾಗಿ ಏರಿಕೆಯಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದ್ದು, ಬುಧವಾರ ಇಲ್ಲಿ ನಡೆದ ನೀತಿ ಆಯೋಗದ ಕಾರ್ಯಕ್ರಮದಲ್ಲಿ ಅದನ್ನು ಬಿಡುಗಡೆ ಮಾಡಲಾಯಿತು.