ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಸಿ.ಕೆ.ಜಾಫರ್ ಷರೀಫ್ ಜೀವನ ಕಥನ ಕುರಿತು ಬರೆದಿರುವ ‘ಸಾಧಕನ ಬದುಕು’ ಕೃತಿಗೆ ಮುನ್ನುಡಿ ಬರೆದಿರುವುದನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ‘ಕಡುಬಡತನದಲ್ಲಿ ಬೆಳೆದ ಷರೀಫ್ ಒಬ್ಬ ನಿಷ್ಠುರ ರಾಜಕಾರಣಿ, ಅಪ್ಪಟ ರಾಷ್ಟ್ರೀಯವಾದಿ ಆಗಿದ್ದರು. ರಾಷ್ಟ್ರರಾಜಕಾರಣದಲ್ಲಿ ಗುರುತಿಸಿಕೊಂಡ ಅಪರೂಪದ ಕನ್ನಡಿಗ’ ಎಂದರು.