ನೇರವಾಗಿ ಸ್ವೀಕರಿಸಿದ್ದ ದೂರುಗಳಲ್ಲಿ 14,750ನ್ನು ಎಸಿಬಿ ಮುಕ್ತಾಯಗೊಳಿಸಿದೆ. ಅವುಗಳ ಪೈಕಿ, ಸಾಬೀತಾಗಿಲ್ಲ, ಅನಾಮಧೇಯ, ಗುಪ್ತನಾಮದಿಂದ ಬಂದವುಗಳು ಹೀಗೆ ನಾನಾ ಕಾರಣ ನೀಡಿ ಮುಕ್ತಾಯಗೊಳಿಸಿದ 7,829 ದೂರುಗಳಲ್ಲಿ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪ್ರಭಾವಿ ರಾಜಕಾರಣಿಗಳು, ಹಲವು ಐಎಎಸ್ ಅಧಿಕಾರಿಗಳ ವಿರುದ್ಧದ ದೂರುಗಳು ಸಾಕಷ್ಟಿವೆ.