ಎಂಟು ವರ್ಷದ ಸಂತೋಷ್ನಿಗೆಆಸ್ಟರ್ ಆಸ್ಪತ್ರೆಯ ಐಎಲ್ಸಿ ಹಾಗೂ ಸಿಎಂಐ ಜಂಟಿ ಅಭಿಯಾನದಡಿ ಐದು ತಿಂಗಳ ಹಿಂದೆ ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಮಗು ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆ ಫಲ ನೀಡಿದೆ.ಮಕ್ಕಳಲ್ಲಿ ಯಕೃತ್ ಸಮಸ್ಯೆ ಗಂಭೀರ ಸ್ವರೂಪದ್ದಾಗಿದ್ದು, ಕಸಿ ಬಳಿಕ ಆರೈಕೆ ತುಂಬಾ ಮುಖ್ಯ ಎನ್ನುತ್ತಾರೆ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಚೇತನ್ ಗಿಣಿಗೇರಿ.ಡಾ. ಸೋನಲ್ ಆಸ್ಥಾನಾ, ಡಾ. ರಾಜೀವ್ ಲೋಚನ್, ಡಾ. ಮಲ್ಲಿಕಾರ್ಜುನ ಸಕ್ಪಾಲ್ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದಲ್ಲಿದ್ದರು.