ಬೆಂಗಳೂರು: ವಿಧಾನಸೌಧದಲ್ಲಿ ಬಹುನಿರೀಕ್ಷಿತ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಸಭೆಗೆ ಗೈರು ಹಾಜರಾಗಿರುವ ಒಂಬತ್ತ ಶಾಸಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಶಾಸಕರಾದಎಂಟಿಬಿ ನಾಗರಾಜ್, ಅಂಜಲಿ ನಿಂಬಾಳ್ಕರ್,ಸುಧಾಕರ್, ರಾಜೇಗೌಡ, ಸಂಗಮೇಶ್ ಭದ್ರಾವತಿ, ಶ್ರೀಮಂತ ಪಾಟೀಲ ರೋಷನ್ ಬೇಗ್, ರಾಮಲಿಂಗಾರೆಡ್ಡಿ, ತುಕಾರಾಂ ಸಭೆಯಲ್ಲಿ ಪಾಲ್ಗೊಂಡಿಲ್ಲ.
ಸಭೆಯಲ್ಲಿ ಪಾಲ್ಗೊಂಡಿರುವ ಸೌಮ್ಯಾರೆಡ್ಡಿ ತಮ್ಮ ನಿರ್ಧಾರವನ್ನು ನಂತರ ತಿಳಿಸುವುದಾಗಿ ಈ ಮೊದಲು ಹೇಳಿದ್ದರು. ಸಭೆಯಲ್ಲಿ ಪಾಲ್ಗೊಂಡಿರುವ ಶಾಸಕರು ‘ಮೈತ್ರಿ ಸಾಕು’ ಎನ್ನುತ್ತಿದ್ದಾರೆ ಎಂದು ಸುದ್ದಿ ಚಾನೆಲ್ಗಳು ವರದಿ ಮಾಡಿವೆ.