‘ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನದಲ್ಲಿ ಇರುವಂಥ ಭಾರತೀಯ ಮೂಲದ ಅಲ್ಪಸಂಖ್ಯಾತರು ಅಲ್ಲಿ ಹಿಂಸೆ ತಾಳಲಾರದೇ ಇಲ್ಲಿಗೆ ಬಂದು ಶರಣಾರ್ಥಿಯಾದರೆ, ಅವರೆಲ್ಲರಿಗೂ ಪೌರತ್ವ ನೀಡಲಿಕ್ಕಾಗಿ ಕೇಂದ್ರ ತಿದ್ದುಪಡಿ ಮಾಡಿದೆ. ಇದರ ವಿರುದ್ಧ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಮಾನವತಾವಾದದ ಕುರಿತು ಮಾತನಾಡುವ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಕೂಡ ಮಾನವೀಯತೆಯ ಶತ್ರುಗಳಾಗಿದ್ದು, ಅಮಾನವೀಯವಾಗಿ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.