ಬೆಂಗಳೂರು: ಸಂಪೂರ್ಣವಾಗಿ ಒಣಗಿರುವ ಹಾಗೂ ಅನುತ್ಪಾದಕ ತೆಂಗಿನ ಮರಗಳನ್ನು ಹೊಂದಿರುವ ತೆಂಗಿನ ಬೆಳೆಗಾರರಿಗೆ ಪ್ರೋತ್ಸಾಹಧನ ನೀಡಲು ತೋಟಗಾರಿಕೆ ಇಲಾಖೆ ₹25 ಕೋಟಿ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ 44.54 ಲಕ್ಷ ತೆಂಗಿನ ಮರಗಳು ಒಣಗಿದ್ದು, ₹178 ಕೋಟಿ ಪ್ರೋತ್ಸಾಹಧನ ವಿತರಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿತ್ತು. ಪ್ರತಿ ತೆಂಗಿನ ಮರಕ್ಕೆ ₹400 ನೀಡಲಾಗುತ್ತಿದೆ. ಡಿಬಿಟಿ (ನೇರ ನಗದು ಪಾವತಿ) ಮೂಲಕ ಹಣ ಪಾವತಿ ಮಾಡಲಾಗುತ್ತಿದ್ದು, ಈವರೆಗೆ ₹108 ಕೋಟಿ ಸಹಾಯಧನ ವಿತರಿಸಲಾಗಿದೆ.