ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲ್ತಿಯಲ್ಲಿರಲು ಎಚ್‌ಡಿಕೆ ಹೇಳಿಕೆ: ಸಿಟಿ ರವಿ ಗೇಲಿ

Last Updated 26 ಜನವರಿ 2020, 19:47 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕಳೆದುಹೋಗಬಾರದು ಎಂದು ಕೆಲವೊಮ್ಮೆ ಹೇಳಿಕೆ ನೀಡುತ್ತಾರೆ. ಬೆದರಿಕೆ ಯಾರಿಂದ ಬಂದಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಬೇಕು’ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂತಹ ಹೇಳಿಕೆಗಳ ಮೂಲಕ ಸಕ್ರಿಯವಾಗಿರಬಾರದು. ಜನರ ನಡುವೆ ಸಕ್ರಿಯವಾಗಿರಲು ಸಕಾರಾತ್ಮಕ ಅಂಶಗಳು ಬಹಳಷ್ಟು ಇವೆ. ಸಂಘ ಪರಿವಾರವನ್ನು ಆರೋಪಿಸುವುದು ಈಗ ‘ಫ್ಯಾಷನ್‌’ ಆಗಿದೆ. ಯಾರ ಮೂಲಕ ಬೆದರಿಕೆ ಬಂದಿದೆ ಎಂದು ದೂರು ಕೊಟ್ಟರೆ ಪತ್ತೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಉತ್ತರಿಸಿದರು.

‘ಕುಮಾರಸ್ವಾಮಿ ಅವರೂ ಸೇರಿದಂತೆ ಜನಸಾಮಾನ್ಯರೆಲ್ಲರ ರಕ್ಷಣೆ ಸರ್ಕಾರದ ಹೊಣೆ. ನಾವು ಬೆದರಲ್ಲ, ಯಾರನ್ನೂ ಬೆದರಿಸುವುದೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT