ಹೊನ್ನಾಳಿ: ‘ನ್ಯಾಮತಿ ತಾಲ್ಲೂಕಿನ (ಈ ಮುನ್ನ ಹೊನ್ನಾಳಿ ತಾಲ್ಲೂಕಿಗೆ ಒಳಪಟ್ಟಿತ್ತು) ಮಲ್ಲಿಗೇನಹಳ್ಳಿಯಲ್ಲಿ ಶ್ರಾವಣಮಾಸದಲ್ಲಿ ದಲಿತರು ರಸ್ತೆಯಲ್ಲಿ ಓಡಾಡುವಂತಿಲ್ಲ. ಚಪ್ಪಲಿ ಧರಿಸುವಂತಿಲ್ಲ. ಊರೊಳಗೆ, ದೇವಸ್ಥಾನಗಳಿಗೆ ಪ್ರವೇಶ ಮಾಡುವಂತಿಲ್ಲ ಎಂದು ಲಿಂಗಾಯತ ಸಮುದಾಯದ ಮುಖಂಡರು ಆದೇಶ ಮಾಡಿದ್ದು, ಗ್ರಾಮದ ದಲಿತರು ಇದರಿಂದ ತೀವ್ರ ತೊಂದರೆಗೊಳಗಾಗಿದ್ದಾರೆ’ ಎಂದು ಹೊನ್ನಾಳಿ ತಾಲ್ಲೂಕು ಘಟಕದ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಮಾರಿಕೊಪ್ಪ ಮಂಜುನಾಥ್ ಆರೋಪಿಸಿದರು.