ಬೆಂಗಳೂರು: ರಾಜ್ಯದ ಕರಾವಳಿ, ಕೊಡಗು, ಶಿವಮೊಗ್ಗ, ಗದಗ, ಧಾರವಾಡ, ಹಾವೇರಿ, ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಸಿಡಿಲು ಬಡಿದು ಬಾಲಕಿ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಮೈಲಾಪುರ ಗ್ರಾಮದ ವಿರೂಪಾಕ್ಷಪ್ಪ (40), ಗದಗ ಜಿಲ್ಲೆ ನರ ಗುಂದ ತಾಲ್ಲೂಕಿನ ಹದಲಿ ಗ್ರಾಮದ ವೆಂಕವ್ವ ಯಲ್ಲಪ್ಪ ವಿಠಪ್ಪನವರ (35), ಜಮಖಂಡಿ ತಾಲ್ಲೂಕಿನ ಆಲಗೂರ ಗ್ರಾಮದ ಅಭಿನಂದ ಚಂದಪ್ಪ ನರಸ ಗೊಂಡ (19),ರಾಣೆಬೆನ್ನೂರು ತಾಲ್ಲೂ ಕಿನ ಕೋಣನತಲೆ ಗ್ರಾಮದ ನಿಂಗಪ್ಪ ಶಿವಪ್ಪ ಬಾಗೂರು (50) ಸಾವಿಗೀಡಾಗಿದ್ದಾರೆ.
ಬಸವನಬಾಗೇವಾಡಿ ತಾಲ್ಲೂಕಿನ ತಳೇವಾಡ ಗ್ರಾಮದ ರೇಣುಕಾ ಬಸನಗೌಡ ಪಾಟೀಲ (35), ಸವಿತಾ ಸಂಗನಗೌಡ ಪಾಟೀಲ (16) ಮೃತಪಟ್ಟಿದ್ದಾರೆ. ಮುಳವಾಡ ಲಂಬಾಣಿ ತಾಂಡದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗುಜುಬಾಯಿ ಕಾಮು ರಾಠೋಡ (40) ಮೃತಪಟ್ಟಿದ್ದಾರೆ. ಇವರೊಂದಿಗೆ ಇದ್ದ ಉಳಿದ ಐವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಗಳೂರು ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿ ಸೋಮವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದಾರೆ. ಅಜ್ಜಯ್ಯ (40) ಸಿಡಿಲಿಗೆ ಬಲಿಯಾದವರು. ಹೊಲದಲ್ಲಿ ಮೆಕ್ಕೆಜೋಳ ತೆನೆಯನ್ನು ಟ್ರ್ಯಾಕ್ಟರ್ಗೆ ತುಂಬುವಾಗ ಸಿಡಿಲು ಬಡಿದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಯಾದಗಿರಿ ಜಿಲ್ಲೆ ಗುರುಮಠಕಲ್ ಪಟ್ಟಣದಲ್ಲಿ ಸಿಡಿಲು ಬಡಿದು ಚಂದ್ರಪ್ಪ (65) ಎಂಬುವವರು ಮೃತಪಟ್ಟಿದ್ದಾರೆ.
ಬಳ್ಳಾರಿ ತಾಲ್ಲೂಕಿನ ಹಡ್ಲಿಗಿ ಗ್ರಾಮದಲ್ಲಿ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.