ಬಾಗಲಕೋಟೆ: ಟ್ರಾನ್ಸ್ಫಾರ್ಮರ್ (ಟಿಸಿ) ಬಿಲ್ ಪೂರೈಕೆಗೆ ವಿದ್ಯುತ್ ಗುತ್ತಿಗೆದಾರರೊಬ್ಬರಿಂದ 10 ಸಾವಿರ ಲಂಚ ಪಡೆಯುತ್ತಿದ್ದ ಹೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇಲ್ಲಿನ ನವನಗರ 6ನೇ ಸೆಕ್ಟರ್ನಲ್ಲಿ ಇರುವ ಹೆಸ್ಕಾಂ ವಲಯ ಕಚೇರಿ ಎಂಜಿನಿಯರ್ ಚಂದ್ರಶೇಖರ್ ಲೋಕಾಯುಕ್ತ ಬಲೆಗೆ ಬಿದ್ದವರು.
ಟ್ರಾನ್ಸ್ಫಾರ್ಮರ್ ಪೂರೈಕೆ ಮಾಡಿದ್ದ ಗುತ್ತಿಗೆದಾರ ಗುರುಬಸವ ಸಿಂಧೂರ ಅವರ ಆರು ಬಿಲ್ಗಳು ಬಾಕಿ ಉಳಿದಿದ್ದು, ಅವುಗಳನ್ನು ಪಾವತಿಸಲು ಚಂದ್ರಶೇಖರ ₹10 ಸಾವಿರ ಲಂಚ ಕೇಳಿದ್ದರು. ಆ ಬಗ್ಗೆ ಗುರುಬಸವ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಗಣಪತಿ ಗಡಾಜೆ ಹಾಗೂ ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲಾ ಅವರ ತಂಡ ಬುಧವಾರ ಹೆಸ್ಕಾಂ ಕಚೇರಿಯಲ್ಲಿ ಚಂದ್ರಶೇಖರ ಅವರು ಲಂಚ ಪಡೆಯುವಾಗ ದಾಳಿ ನಡೆಸಿ ಬಂಧಿಸಿದ್ದಾರೆ.