‘ಮುಖ್ಯಂತ್ರಿಯಾದ ಬಳಿಕ ಎಚ್.ಡಿ. ಕುಮಾರಸ್ವಾಮಿ ದೇವಸ್ಥಾನ ಸುತ್ತಿದರೇ ಹೊರತು ಜನರ ಸಂಕಷ್ಟಗಳನ್ನು ಅರಿಯಲು ರಾಜ್ಯ ಪ್ರವಾಸ ಕೈಗೊಳ್ಳಲಿಲ್ಲ. ಜ್ಯೋತಿಷಿಯೊಬ್ಬರ ಮಾತು ಕೇಳಿಕೊಂಡು ಲೋಕೋಪಯೋಗಿ ಸಚಿವ ರೇವಣ್ಣ ಅವರು ನಿರ್ದಿಷ್ಟ ಸರ್ಕಾರಿ ಬಂಗಲೆ ಸಿಗುವರೆಗೂ ಹಾಸನದಿಂದೇ ಬೆಳಿಗ್ಗೆ ಎದ್ದು ಕೈಯಲ್ಲಿ ಲಿಂಬೆಹಣ್ಣು ಹಿಡಿದು ವಿಧಾನಮಂಡಲದ ಅಧಿವೇಷನಕ್ಕೆ ಬರುತ್ತಿದ್ದರು. ಈ ಕುಟುಂಬದವರು ರಾಜ್ಯದ ಜನರ, ರೈತರ ಹಿತಕ್ಕಾಗಿ ಮಾಟ–ಮಂತ್ರವನ್ನೇನೂ ಮಾಡಿಸಿಲ್ಲ’ ಎಂದು ಜರೆದರು.