ತಿರುಪತಿ ಶ್ರೀನಿವಾಸ ದೇವರ ದರ್ಶನಕ್ಕೆ ತೆರಳಿರುವ ಅವರು ವಿಡಿಯೋ ದೃಶ್ಯಾವಳಿ ಮೂಲಕ ಮಾಹಿತಿ ನೀಡಿದ್ದು, ‘ಪೇಜಾವರ ಶ್ರೀಗಳ ಹೆಸರಿನಲ್ಲಿ ಭಕ್ತಿ, ಶ್ರದ್ಧೆಯಿಂದ ಸಂಕಲ್ಪ ಮಾಡಬೇಕು. ಹರಿವಾಯು ಸ್ತುತಿ, ವಿಷ್ಣು ಸಹಸ್ರನಾಮ, ರಾಘವೇಂದ್ರಸ್ವಾಮಿಗಳ ಅಷ್ಟೋತ್ತರ, ಬನ್ನಿಸೂಕ್ತ ಹಾಗೂ ಮೃತ್ಯುಂಜಯ ಮಂತ್ರದ ವಿಶೇಷ ಪಾರಾಯಣ ಮಾಡುವಂತೆ ಅವರು ಮಠಗಳ ಶಿಷ್ಯರಿಗೆ ಹಾಗೂ ಸಿಬ್ಬಂದಿಗೆ ಸಂದೇಶ ರವಾನಿಸಲಾಗಿದೆ’ ಎಂದು ತಿಳಿಸಿದ್ದಾರೆ.