ಬೆಂಗಳೂರು: ಕರ್ನಾಟಕಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ‘ಮುಸ್ಲಿಂ ಹೆಂಗಸಿನ ಹಿಂದೆ ಓಡಿ ಹೋದವನು...’ ಎಂದೆಲ್ಲ ಹೀಯಾಳಿಸಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾಡಿರುವ ಟ್ವೀಟ್ಗೆ ದಿನೇಶ್ ಪ್ರತಿಕ್ರಿಯಿಸಿದ್ದು, ’ಇದು ಅವರಲ್ಲಿನ ಸಂಸ್ಕೃತಿಯ ಅಭಾವವನ್ನು ತೋರುತ್ತದೆ..’ ಎಂದಿದ್ದಾರೆ.
‘ವೈಯಕ್ತಿಕ ವಿಚಾರಗಳನ್ನು ಚರ್ಚಿಸುವ ಮೂಲಕ ಅನಂತಕುಮಾರ್ ಹೆಗಡೆ ಅತ್ಯಂತ ಕೆಳಮಟ್ಟಕೆ ಇಳಿದಿರುವುದನ್ನು ಕಾಣಲು ಬೇಸರವಾಗುತ್ತಿದೆ. ಬಹುಶಃ ಇದು ಅವರಲ್ಲಿನ ಸಂಸ್ಕಾರದ ಕೊರತೆಯುನ್ನುತೋರುತ್ತದೆ. ಅವರು ಹಿಂದೂ ಧರ್ಮಗ್ರಂಥಗಳಿಂದ ತಿಳಿವಳಿಕೆ ಪಡೆದಂತೆ ಕಾಣುತ್ತಿಲ್ಲ. ಸಮಯ ಇನ್ನೂ ಮೀರಿಲ್ಲ, ಪ್ರಯತ್ನಿಸಿದರೆ ಅವರೂ ಸಹ ಘನತೆಯುಳ್ಳ ವ್ಯಕ್ತಿಯಾಗಲು ಸಾಧ್ಯವಿದೆ’ ಎಂದು ದಿನೇಶ್ ಗುಂಡೂರಾವ್ ಸೋಮವಾರ ಟ್ವೀಟ್ ಮೂಲಕ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಸಲಹೆ ನೀಡಿದ್ದಾರೆ.
Sad to see @AnantkumarH stoop to such low levels as to bring in personal issues.
— Dinesh Gundu Rao (@dineshgrao) January 28, 2019
Guess it’s his lack of culture.
Guess he hasn’t learnt from our Hindu scriptures.
Time hasn’t run out, he can still try and become a more dignified human. https://t.co/AaX5OuUAVb
‘ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಅನ್ಯಧರ್ಮದ ಯುವಕರು ಮುಟ್ಟಿದರೆ ಅವರ ಕೈ ಇರಬಾರದು. ಹಿಂದೂ ಸಂಘಟನೆಯ ಕಾರ್ಯಕರ್ತರು ಅಂಥವರ ಕೈತೆಗೆದು ಇತಿಹಾಸ ನಿರ್ಮಿಸಬೇಕು’ ಎಂದು ಭಾನುವಾರ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನೀಡಿದ್ದ ಹೇಳಿಕೆಯ ವರದಿಯೊಂದನ್ನು ಹಂಚಿಕೊಂಡು, ‘ಸಂಸದರಾಗಿ ನಿಮ್ಮ ಸಾಧನೆ ಏನು’ ಎಂದು ದಿನೇಶ್ ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು.
@AnantkumarH
— Dinesh Gundu Rao (@dineshgrao) January 27, 2019
Wht are ur achievements after becoming a Union Minister or as MP?
Wht are ur contributions for Karnataka’s development?
All I can say for sure,it’s deplorable tht such people have become ministers & have managed to get elected as MP’s. https://t.co/IMtjPSj9aK
‘ಕೇಂದ್ರ ಸಚಿವರಾದ ಬಳಿಕ ಅಥವಾ ಸಂಸದರಾಗಿ ನಿಮ್ಮ ಸಾಧನೆಗಳೇನು? ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಕೊಡುಗೆಗಳೇನು?- ಇಂಥ ವ್ಯಕ್ತಿಗಳು ಸಚಿವರಾಗುವುದು ಹಾಗೂ ಸಂಸದರಾಗಿ ಆಯ್ಕೆಯಾಗುವುದು ಶೋಚನೀಯ ಎಂದು ಹೇಳಬಹುದು’– ಹೀಗೆ ದಿನೇಶ್ ಮಾಡಿದ್ದ ಟ್ವೀಟ್ಗೆ ಪ್ರತಿಯಾಗಿ; ’ದಿನೇಶ್ ಗುಂಡೂರಾವ್ ಅವರ ಪ್ರಶ್ನೆಗಳಿಗೆ ನಾನು ಖಂಡಿತವಾಗಿ ಉತ್ತರಿಸುತ್ತೇನೆ, ಅದಕ್ಕೂ ಮುನ್ನ ಸಾಧನೆಗಳೊಂದಿಗೆ ಅವರು ಯಾರೆಂದು ನಮಗೆ ತಿಳಿಸಿಕೊಡಲಿ. ಆತ ಮುಸ್ಲಿಂಮಹಿಳೆಯ ಹಿಂದೆ ಓಡಿದವನಾಗಿ ಮಾತ್ರ ನನಗೆ ತಿಳಿದಿದೆ’ ಎಂದು ಅನಂತಕುಮಾರ್ ಹೆಗಡೆ ಟ್ವೀಟಿಸಿದ್ದರು.
I shall definitely answer this guy @dineshgrao's queries, before which could he please reveal himself as to who he is along with his achievements?
— Anantkumar Hegde (@AnantkumarH) January 27, 2019
I only know him as a guy who ran behind a Muslim lady. https://t.co/8hVJ2wQXMU
ಈ ನಾಯಕರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಹಗ್ಗಜಗ್ಗಾಟದಲ್ಲಿ ಪರ–ವಿರೋಧಿಗಳ ತಂಡವೂ ಕೈಜೋಡಿಸಿ, ಸರಣಿ ಚರ್ಚೆಗಳಿಗೆ ನಾಂದಿ ಹಾಡಿದೆ.
ಹಲವು ಬಾರಿ ಪ್ರಚೋದನೆಯ ಹೇಳಿಕೆ ನೀಡಿ ಅನಂತರ ಕ್ಷಮೆ ಬೇಡುವ ಚಾಳಿ ಇರುವ ಈ ವ್ಯಕ್ತಿಗೆ @dineshgrao ಯಾಕಿಷ್ಟು ತುರಿಕೆರೋಗ? https://t.co/6kW4UIgNzF
— Anantkumar Hegde (@AnantkumarH) January 27, 2019
‘ಹಲವು ಬಾರಿ ಪ್ರಚೋದನೆಯ ಹೇಳಿಕೆ ನೀಡಿ ಅನಂತರ ಕ್ಷಮೆ ಬೇಡುವ ಚಾಳಿ ಇರುವ ಈ ವ್ಯಕ್ತಿಗೆ ಯಾಕಿಷ್ಟು ತುರಿಕೆರೋಗ?’ ಎಂದೂ ಅನಂತಕುಮಾರ್ ಹೆಗಡೆ ಟ್ವೀಟಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.