ಬೆಂಗಳೂರು:ಎಂಟಿಬಿ ನಾಗರಾಜ್ ಜೊತೆಗೆ ಸುದೀರ್ಘ ಮಾತುಕತೆಯ ನಂತರ ಸಂತೃಪ್ತ ಭಾವದಲ್ಲಿ ಮಾಧ್ಯಮಗಳ ಎದುರು ಬಂದು ನಿಂತ ಸಚಿವ ಡಿ.ಕೆ.ಶಿವಕುಮಾರ್, ‘ಸತತ 40 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಎಂಟಿಬಿ ನಾಗರಾಜ್ ತುಂಬಾ ಕಷ್ಟದ ಸಂದರ್ಭಗಳಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಕಾಪಾಡಿದ್ದಾರೆ. ನಾವು ಸದಾ ಜೊತೆಗಿರೋಣ, ಜೊತೆಗೆ ಸಾಯೋಣ. ಹಳೆಯದನ್ನು ಮರೆತುಒಗ್ಗಟ್ಟಿನಿಂದ ಮುನ್ನಡೆಯುವತೀರ್ಮಾನ ಮಾಡಿದ್ದೇವೆ’ ಎಂದು ಹೇಳಿದರು.