‘ಅವನು ನಿಜವಾದ ಗಂಡಸೇ ಆಗಿದ್ದರೆ ಸುರೇಶ್ ವಿರುದ್ಧ ಸ್ಪರ್ಧೆ ಮಾಡುತ್ತಿದ್ದ. ಹೇಡಿಯಂತೆ ಹಿಂದೆ ಸರಿದು, ಈಗ ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಅವನನ್ನ ಈ ಭಾಗದಲ್ಲಿ ಬಿಜೆಪಿ ಬಾವುಟ ಕಟ್ಟಲು ಇಟ್ಟುಕೊಂಡಿದ್ದಾರೆಅಷ್ಟೇ. ಯಡಿಯೂರಪ್ಪ ಆತನನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ. ಹೈಕಮಾಂಡ್ ಕೂಡ ನಿರ್ಲಕ್ಷ್ಯ ಮಾಡಿದೆ. ಆದರೂ ತಾನು ಬಿಎಸ್ವೈಗೆ ಬಹಳ ಹತ್ತಿರದಲ್ಲಿ ಇದ್ದೇನೆ ಎಂದು ನಂಬಿಸುತ್ತಿದ್ದಾನೆ’ ಎಂದು ಟೀಕಿಸಿದರು.