‘ಚುನಾವಣೆ ಘೋಷಣೆಯ ಬಳಿಕಿ ಸಂವಿಧಾನಾತ್ಮಕ ಹುದ್ದೆ ಹೊಂದಿದವರು ಹಾಗೂ ರಾಜ್ಯಪಾಲರಾದ ಕಲ್ಯಾಣ್ ಸಿಂಗ್ ತಾವು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡು, ಮೋದಿಗೆ ಮತ ಹಾಕಿ ಮತ್ತೆ ಪ್ರಧಾನಿ ಮಾಡಿ ಎಂಬ ಹೇಳಿಕೆ ನೀಡುತ್ತಾರೆ. ಅದರ ವರದಿ ಆಧರಿಸಿ ನೀಡಿದ ದೂರನ್ನು ಆಯೋಗ ರಾಷ್ಟ್ರಪತಿಗೆ ನೀಡುತ್ತದೆ. ರಾಷ್ಟ್ರಪತಿ ಕ್ರಮ ಕೈಗೊಳ್ಳುವ ಬದಲು ಕೇಂದ್ರ ಗೃಹ ಸಚಿವರಿಗೆ ಕಡತ ರವಾನಿಸುತ್ತಾರೆ. ರಾಷ್ಟ್ರಪತಿಈ ರೀತಿ ಮಾಡುವ ಬದಲು ಕಲ್ಯಾಣ್ ಸಿಂಗ್ ಅವರನ್ನು ಅಮಾನತು ಮಾಡಿ ದೇಶದಲ್ಲಿ ಆರೋಗ್ಯಕರ ಚುನಾವಣೆ ನಡೆಯುತ್ತಿದೆ ಎಂಬ ಸಂದೇಶ ರವಾನಿಸಬೇಕು’ ಎಂದೂ ಒತ್ತಾಯಿಸಿದರು.