ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರು ಹಾಗೂ ಸೋಂಕು ಶಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ವರದಿಯಾದ ಕೊವಿಡ್–19 ಪ್ರಕರಣಗಳಲ್ಲಿ ವಿದೇಶದಿಂದ ಬಂದವರು ಹಾಗೂ ಅವರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿಯೇ ಸೋಂಕು ಪ್ರಕರಣ ವರದಿಯಾದ ದೇಶಗಳಿಂದ ಬಂದವರನ್ನು ಗುರುತಿಸಿ, ಅವರ ಕೈಗಳಿಗೆ ರಬ್ಬರ್ ಸ್ಟಾಂಪ್ ಮೂಲಕ ಮುದ್ರೆಗಳನ್ನು ಹಾಕಲಾಗುತ್ತಿದೆ. ಕಡ್ಡಾಯವಾಗಿ 14 ದಿನ ಮನೆಯಲ್ಲಿಯೇ ಪ್ರತ್ಯೇಕವಾಸ ಮಾಡಲು ಸೂಚಿಸಲಾಗುತ್ತಿದೆ.