ಮಡಿಕೇರಿಯ ಚಾಮುಂಡೇಶ್ವರಿ ನಗರ ನಿವಾಸಿ ವಿ.ಕೆ.ಧಾಮೋದರ್ ಅವರ ಪುತ್ರಿ ಹರ್ಷಿತಾ ಅವರ ಮದುವೆ ಮೈಸೂರಿನ ವಿಷ್ಣುವರ್ಧನ್ ಜತೆಗೆ ನಿಶ್ಚಯವಾಗಿತ್ತು. ತಿಮ್ಮಪ್ಪನ ಸನ್ನಿಧಿಯಲ್ಲಿ ಮದುವೆ ನೆರವೇರಿಸಲು ಎರಡು ಕುಟುಂಬಸ್ಥರು ನಿರ್ಧರಿಸಿದ್ದರು. ಎರಡು ಕಡೆಯ ಕುಟುಂಬಸ್ಥರು ನ.2ರಂದೇ ತಿರುಪತಿಗೆ ತೆರಳಿದ್ದರು. ಅಂದು ರಾತ್ರಿ ಕೊಠಡಿ ಪಡೆದು ಅಲ್ಲೇ ವಾಸ್ತವ್ಯ ಮಾಡಿದ್ದರು. ಮರು ದಿವಸ ಬೆಳಿಗ್ಗೆ 8.30ಕ್ಕೆ ಮುಹೂರ್ತ ನಿಗದಿಗೊಂಡಿತ್ತು. ಆದರೆ, ಅದಕ್ಕೂ ಮೊದಲು ತಂದೆ ಮಲಗಿದ ಕೊಠಡಿಯಲ್ಲೇ ಸಾವನ್ನಪ್ಪಿದ್ದರು. ವಿಷಯ ಮುಚ್ಚಿಟ್ಟ ಕುಟುಂಬಸ್ಥರು ವಿವಾಹ ನಡೆಸಿದ್ದಾರೆ. ಬಳಿಕ ಹೇಗೋ ಮಗಳಿಗೆ ವಿಷಯ ಗೊತ್ತಾಗಿದೆ. ಆಗ ಪುತ್ರಿಯ ದುಃಖದ ಕಟ್ಟೆ ಒಡೆದಿದೆ.