<p><strong>ಮೈಸೂರು:</strong> ಇಲ್ಲಿನ ಬನ್ನಿಮಂಟಪದ ಸಿ.ವಿ.ರಸ್ತೆಯ ದಾಸ್ತಾನು ಮಳಿಗೆಗೆ ಭಾನುವಾರ ನುಸಕಿನಲ್ಲಿ ಬೆಂಕಿ ಬಿದ್ದು, ಸುಮಾರು ₹30 ಲಕ್ಷಕ್ಕೂ ಅಧಿಕ ಮೌಲ್ಯದ ಗುಜರಿ ಸರಕುಗಳು ಭಸ್ಮವಾಗಿವೆ.</p>.<p>ಸಮೀಪದಲ್ಲೇ ಇದ್ದ ಮನೆಗಳು, ಅಗರಬತ್ತಿ ಕಾರ್ಖಾನೆ ಹಾಗೂ ವಾಹನ ಷೋರಂ ಮಳಿಗೆಗಳಿಗೆ ಬೆಂಕಿ ಹಬ್ಬುವುದನ್ನು ಅಗ್ನಿಶಾಮಕ ಪಡೆ ತಡೆದಿದೆ.</p>.<p>ಬನ್ನಿಮಂಟಪ, ಸರಸ್ವತಿಪುರಂ ಹಾಗೂ ಹೆಬ್ಬಾಳದ ಅಗ್ನಿಶಾಮಕ ಠಾಣೆಗಳಿಂದ 6 ಅಗ್ನಿಶಾಮಕ ವಾಹನಗಳಲ್ಲಿ ಬಂದ 30 ಮಂದಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.</p>.<p>ಗುಜರಿ ವಸ್ತುಗಳಿಗೆ ಹೊತ್ತಿದ್ದ ಬೆಂಕಿಯ ಜ್ವಾಲೆಗಳುಸ್ಥಳೀಯರಲ್ಲಿ ಭೀತಿಯನ್ನು ಸೃಷ್ಟಿಸಿದ್ದವು. ಮೇಯರ್ ತಸ್ನೀಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>‘ಸದ್ಯ, ಬೆಂಕಿಯು ನಿಯಂತ್ರಣಕ್ಕೆ ಬಂದಿದೆ. ನಷ್ಟದ ಅಂದಾಜು ಇನ್ನೂ ಖಚಿತವಾಗಿಲ್ಲ. ಬೆಂಕಿ ಬಿದ್ದಿರುವ ಮಲ್ಲಿಕಾರ್ಜುನ ಎಂಟರ್ಪ್ರೈಸಸ್ನ ರೋಹಿತ್ ಅವರು ₹ 30ರಿಂದ ₹ 50 ಲಕ್ಷದಷ್ಟು ಸರಕುಗಳಿದ್ದವು ಎಂದು ಹೇಳಿದ್ದಾರೆ. ಈಗ ಸರಕುಗಳ ರಾಶಿಯನ್ನು ಜೆಸಿಬಿ ಮೂಲಕ ತೆಗೆದು ಒಳಗಿರುವ ಬೆಂಕಿಯನ್ನು ನಂದಿಸಲಾಗುತ್ತಿದೆ’ ಎಂದು ಬನ್ನಿಮಂಟಪ ಠಾಣೆ ಅಗ್ನಿಶಾಮಕ ಅಧಿಕಾರಿ ಭರತ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಇಲ್ಲಿನ ಬನ್ನಿಮಂಟಪದ ಸಿ.ವಿ.ರಸ್ತೆಯ ದಾಸ್ತಾನು ಮಳಿಗೆಗೆ ಭಾನುವಾರ ನುಸಕಿನಲ್ಲಿ ಬೆಂಕಿ ಬಿದ್ದು, ಸುಮಾರು ₹30 ಲಕ್ಷಕ್ಕೂ ಅಧಿಕ ಮೌಲ್ಯದ ಗುಜರಿ ಸರಕುಗಳು ಭಸ್ಮವಾಗಿವೆ.</p>.<p>ಸಮೀಪದಲ್ಲೇ ಇದ್ದ ಮನೆಗಳು, ಅಗರಬತ್ತಿ ಕಾರ್ಖಾನೆ ಹಾಗೂ ವಾಹನ ಷೋರಂ ಮಳಿಗೆಗಳಿಗೆ ಬೆಂಕಿ ಹಬ್ಬುವುದನ್ನು ಅಗ್ನಿಶಾಮಕ ಪಡೆ ತಡೆದಿದೆ.</p>.<p>ಬನ್ನಿಮಂಟಪ, ಸರಸ್ವತಿಪುರಂ ಹಾಗೂ ಹೆಬ್ಬಾಳದ ಅಗ್ನಿಶಾಮಕ ಠಾಣೆಗಳಿಂದ 6 ಅಗ್ನಿಶಾಮಕ ವಾಹನಗಳಲ್ಲಿ ಬಂದ 30 ಮಂದಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.</p>.<p>ಗುಜರಿ ವಸ್ತುಗಳಿಗೆ ಹೊತ್ತಿದ್ದ ಬೆಂಕಿಯ ಜ್ವಾಲೆಗಳುಸ್ಥಳೀಯರಲ್ಲಿ ಭೀತಿಯನ್ನು ಸೃಷ್ಟಿಸಿದ್ದವು. ಮೇಯರ್ ತಸ್ನೀಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>‘ಸದ್ಯ, ಬೆಂಕಿಯು ನಿಯಂತ್ರಣಕ್ಕೆ ಬಂದಿದೆ. ನಷ್ಟದ ಅಂದಾಜು ಇನ್ನೂ ಖಚಿತವಾಗಿಲ್ಲ. ಬೆಂಕಿ ಬಿದ್ದಿರುವ ಮಲ್ಲಿಕಾರ್ಜುನ ಎಂಟರ್ಪ್ರೈಸಸ್ನ ರೋಹಿತ್ ಅವರು ₹ 30ರಿಂದ ₹ 50 ಲಕ್ಷದಷ್ಟು ಸರಕುಗಳಿದ್ದವು ಎಂದು ಹೇಳಿದ್ದಾರೆ. ಈಗ ಸರಕುಗಳ ರಾಶಿಯನ್ನು ಜೆಸಿಬಿ ಮೂಲಕ ತೆಗೆದು ಒಳಗಿರುವ ಬೆಂಕಿಯನ್ನು ನಂದಿಸಲಾಗುತ್ತಿದೆ’ ಎಂದು ಬನ್ನಿಮಂಟಪ ಠಾಣೆ ಅಗ್ನಿಶಾಮಕ ಅಧಿಕಾರಿ ಭರತ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>