ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಶಾಸಕ ಗಣೇಶ್ ಬಂಧನಕ್ಕೆ ರಾಜ್ಯದ ಪೊಲೀಸ್ ಪಡೆ ಬೆನ್ನು ಹತ್ತಿದೆ. ಮುಂಬೈನಲ್ಲಿ ಹಿಡಿಯಲು ಪ್ರಯತ್ನ ಮಾಡಲಾಗಿತ್ತು. ಆಗ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಯಾರ ಕೈಗೂ ಸಿಗದೆ ಪರಾರಿಯಾಗಿದ್ದಾರೆ. ಗೋವಾದಲ್ಲಿ ಇರುವ ಮಾಹಿತಿ ಸಿಕ್ಕಿದ್ದು, ಶೀಘ್ರ ಬಂಧಿಸಲಿದ್ದಾರೆ. ಈ ಕುರಿತು ರಾಮನಗರ ತನಿಖಾಧಿಕಾರಿ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದೇನೆ' ಎಂದರು.