‘ನಾವು ಹಗಲು ಎರಡು ಸಲ ಮೀನು ಸಾಗಿಸಿದ್ದೇವೆ. ಆದರೆ, ಈಗ ಗೋವಾ ಪೊಲೀಸರು ರಾತ್ರಿ ಎಂಟು ಗಂಟೆಗೆ ತಮಗೆ ಆದೇಶ ಬಂದಿದೆ ಎಂದು ಹೇಳುತ್ತಿದ್ದಾರೆ. ನಮಗೆ ಒಂದು ದಿನ ಮೊದಲು ತಿಳಿಸಬೇಕಿತ್ತು. ಕಾಸರಗೋಡು, ಮಂಗಳೂರು, ಮಲ್ಪೆ, ಉಡುಪಿ, ಭಟ್ಕಳ, ಸಮೀಪದ ಕಾರವಾರದಿಂದ ಬಂದಿದ್ದೇವೆ. ಈಗ ವಾಪಸ್ ಹೋಗುವುದಾದರೂ ಹೇಗೆ? 24 ತಾಸುಗಳಲ್ಲಿ ಅವುಗಳ ವಿಲೇವಾರಿ ಆಗದಿದ್ದರೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ’ ಎಂದು ಲಾರಿ ಚಾಲಕ, ಉಡುಪಿಯಗಣೇಶ ಆಕ್ರೋಶ ವ್ಯಕ್ತಪಡಿಸಿದರು.