<p><strong>ಬೆಂಗಳೂರು: </strong>‘ವಿಧಾನಸಭಾಧ್ಯಕ್ಷರ ಕಚೇರಿಯಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜ್ಯ ವಿಧಾನಸಭೆ ಅಧ್ಯಕ್ಷರು ತಮ್ಮ ಸ್ಥಾನದ ಘನತೆಯನ್ನು ಕುಗ್ಗಿಸಿದ್ದಾರೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವಿಷಾದಿಸಿದರು.</p>.<p>ಜೆಡಿಎಸ್ ರಾಜ್ಯ ಕಾನೂನು ಘಟಕದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ಶಾಸನಸಭೆ ದಿನದಿಂದ ದಿನಕ್ಕೆ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತಿದೆ. ರಾಜ್ಯ ಮಾತ್ರವಲ್ಲ ಬೇರೆ ರಾಜ್ಯಗಳ ವಿಧಾನಸಭೆ ಅಧ್ಯಕ್ಷರೂ ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ. ವ್ಯವಸ್ಥೆಯನ್ನೇ ನಾಶ ಮಾಡಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ಜನಪ್ರತಿನಿಧಿಗಳು ತಮ್ಮ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪೈಪೋಟಿಯ ಭರದಲ್ಲಿ ಅವರ ವರ್ತನೆ ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದೆ. ಭವಿಷ್ಯದಲ್ಲಿ ಇಂತಹ ವ್ಯವಸ್ಥೆಯನ್ನು ಸರಿ ಮಾಡುವುದು ಕಷ್ಟ ಇದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.</p>.<p><strong>ಯಾರಿಗೂ ಬಹುಮತವಿಲ್ಲ:</strong> ‘ಇಂದಿನ ಸನ್ನಿವೇಶ ಗಮನಿಸಿದರೆ ನಮ್ಮನ್ನೂ ಸೇರಿಸಿಕೊಂಡು ಯಾರಿಗೂ ಸ್ಪಷ್ಟ ಬಹುಮತ ಬರುವುದಿಲ್ಲ ಆದಾಗ್ಯೂ ಏಪ್ರಿಲ್ 30ರವರೆಗೆ ಏನನ್ನೂ ಹೇಳಲು ಆಗುವುದಿಲ್ಲ’ ಎಂದರು.</p>.<p>ಸಿದ್ದರಾಮಯ್ಯಗೆ ಹಳೆ ಅಭ್ಯಾಸ : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗಳಲ್ಲಿ ಮತ್ತೊಬ್ಬರ ಮೇಲೆ ಕೈಮಾಡುವ ಪ್ರವೃತ್ತಿ ಹೊಂದಿದ ಮನುಷ್ಯ. ಈ ಹಿಂದೆ ಅನೇಕ ಬಾರಿ ನಾನೇ ಅವರನ್ನು ಆ ರೀತಿ ವರ್ತಿಸಿದಂತೆ ತಡೆದಿದ್ದೆ. ಈಗಲೂ ಅವರು ಅದೇ ರೀತಿಯ ಆಕ್ರೋಶ ವರ್ತನೆ ಪ್ರದರ್ಶಿಸುತ್ತಾರೆ’ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದರು.</p>.<p>‘ಕೆ.ಎಚ್.ಶ್ರೀನಿವಾಸ್ ಅವರನ್ನು ಶಿವಮೊಗ್ಗದಲ್ಲಿ ಒಂದು ಬಾರಿ ಜಾತಿ ಹೆಸರು ಹಿಡಿದು ನಿಂದಿಸುತ್ತಾ ಅವರಿಗೆ ಹೊಡೆಯಲು ಹೋಗಿದ್ದರು. ಆಗ ನಾನೇ ತಡೆದಿದ್ದೆ’ ಎಂದು ಸ್ಮರಿಸಿಕೊಂಡರು.</p>.<p><strong>17ರಂದು ವಕೀಲರ ಸಮಾವೇಶ :</strong> ಇದೇ 17ರಂದು ನಗರದ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ವಕೀಲರ ಸಮಾವೇಶ ನಡೆಯಲಿದೆ ಎಂದು ರಾಜ್ಯ ಜೆಡಿಎಸ್ನ ಯುವ ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದರು.</p>.<p>‘ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಈ ಸಮಾವೇಶದಲ್ಲಿ ಸಲಹೆ ಸೂಚನೆ ಪಡೆಯಲಾಗುವುದು’ ಎಂದರು.</p>.<p><strong>‘ಕೊಡಲು ನನ್ನ ಬಳಿ ಏನೂ ಇಲ್ಲ...!’</strong><br /> ‘ಯಾರಿಗೂ ಏನೂ ಕೊಡೊ ಶಕ್ತಿ ಇಲ್ಲ. ನಿಮ್ಮ ಮಾಲೀಕರಿಗೆ ಕೊಡಲೂ ನನ್ನ ಬಳಿ ಶಕ್ತಿ ಇಲ್ಲ. ಬೇಜಾರು ಮಾಡ್ಕೊಬೇಡಿ. ಕಾಫಿ ಕುಡ್ಕೊಂಡು ಹೋಗ್ರಪ್ಪಾ...’</p>.<p>ಜೆಡಿಎಸ್ನ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ರೀತಿ ಹೇಳಿದ ದೇವೇಗೌಡ ‘ನಿಮ್ಮ ಸಹಕಾರ ಇಲ್ಲದೇ ನಾನು ಏನೂ ಮಾಡಲು ಆಗುವುದಿಲ್ಲ’ ಎಂದರು!</p>.<p>‘ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಚಿಕ್ಕಬಳ್ಳಾಪುರದಿಂದ ಒಂದೈವತ್ತು ಜನ ಕಾಂಗ್ರೆಸ್ನವರು ಜೆಡಿಎಸ್ ಸೇರಲು ಬರ್ತಿದ್ದಾರೆ. ಸ್ವಲ್ಪ ಇರಿ. ನೋಡ್ಕೊಂಡು ಹೋಗಿ’ ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ 45 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದರು.</p>.<p><strong>ದೇವೇಗೌಡರ ಕಾರು ತಡೆದು ಪ್ರತಿಭಟನೆ<br /> ಬೆಂಗಳೂರು:</strong> ‘ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕು’ ಎಂದು ಒತ್ತಾಯಿಸಿ ‘ಪ್ರಜ್ವಲ್ ಬ್ರಿಗೇಡ್’ ಕಾರ್ಯಕರ್ತರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಕಾರಿಗೆ ಶನಿವಾರ ತಡೆ ಒಡ್ಡಿದರು. ಪದ್ಮನಾಭ ನಗರದ ನಿವಾಸದಿಂದ ಹೊರ ಹೋಗದಂತೆ ಅಡ್ಡಿಪಡಿಸಿದರು.</p>.<p>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರೂ ಸೇರಿದಂತೆ ನೂರಾರು ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>.<p>‘ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೊತೆ ಕೈ ಜೋಡಿಸಿದ್ದೀರಿ ಎಂಬ ಮಾತಿದೆ. ಹೀಗಾಗದಂತೆ ನೋಡಿಕೊಳ್ಳಿ. ಡಮ್ಮಿ ಅಭ್ಯರ್ಥಿ ಹಾಕಿ ಕಾಂಗ್ರೆಸ್ನ ಮುನಿರತ್ನ ಗೆಲ್ಲುವಂತೆ ಮಾಡಿದರೆ ಸುಮ್ಮನಿರೋದಿಲ್ಲ’ ಎಂದು ಎಚ್ಚರಿಸಿದರು.</p>.<p>ಬಿಬಿಎಂಪಿ ಸದಸ್ಯೆ ಮಂಜುಳಾ ಪತಿ ಲಗ್ಗೆರೆ ನಾರಾಯಣ ಸ್ವಾಮಿ ಮಾತನಾಡಿ, ‘ಪ್ರಜ್ವಲ್ಗೆ ಟಿಕೆಟ್ ಕೊಡಲೇಬೇಕು. ಇಲ್ಲದಿದ್ದರೆ ಇಲ್ಲೇ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದರು.</p>.<p>‘ಇದೇ 13 ರಂದು ಆರ್.ಆರ್.ನಗರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಜ್ವಲ್ ಹೆಸರು ಘೋಷಿಸಬೇಕೆಂದು ಆಗ್ರಹಿಸಿದರು. ಆದರೆ ದೇವೇಗೌಡರು ಇದ್ಯಾವುದಕ್ಕೂ ಪ್ರತಿಕ್ರಿಯಿಸದೆ ಕಾರಿನಲ್ಲಿ ಹೊರಟು ಹೋದರು.</p>.<p>‘ನೀತಿ ಸಂಹಿತೆ ಇದೆ ಗಲಾಟೆ ಮಾಡಬೇಡಿ’ ಎಂದು ಪೊಲೀಸರು ಅವರನ್ನು ಸಮಾಧಾನ ಪಡಿಸಿ ಅಲ್ಲಿಂದ ಕಳುಹಿಸಿದರು. ದೇವೇಗೌಡರು ಹೊರಟ ನಂತರವೂ ಅಭಿಮಾನಿಗಳು ಸ್ವಲ್ಪ ಹೊತ್ತು ಪ್ರತಿಭಟನೆ ಮುಂದುವರಿಸಿ ನಂತರ ಚದುರಿದರು.</p>.<p>ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬುದನ್ನು ಇದೇ 13 ರಂದು ಪ್ರಕಟಿಸುವುದಾಗಿ ದೇವೇಗೌಡ ಈಗಾಗಲೇ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ವಿಧಾನಸಭಾಧ್ಯಕ್ಷರ ಕಚೇರಿಯಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜ್ಯ ವಿಧಾನಸಭೆ ಅಧ್ಯಕ್ಷರು ತಮ್ಮ ಸ್ಥಾನದ ಘನತೆಯನ್ನು ಕುಗ್ಗಿಸಿದ್ದಾರೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವಿಷಾದಿಸಿದರು.</p>.<p>ಜೆಡಿಎಸ್ ರಾಜ್ಯ ಕಾನೂನು ಘಟಕದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ಶಾಸನಸಭೆ ದಿನದಿಂದ ದಿನಕ್ಕೆ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತಿದೆ. ರಾಜ್ಯ ಮಾತ್ರವಲ್ಲ ಬೇರೆ ರಾಜ್ಯಗಳ ವಿಧಾನಸಭೆ ಅಧ್ಯಕ್ಷರೂ ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ. ವ್ಯವಸ್ಥೆಯನ್ನೇ ನಾಶ ಮಾಡಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ಜನಪ್ರತಿನಿಧಿಗಳು ತಮ್ಮ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪೈಪೋಟಿಯ ಭರದಲ್ಲಿ ಅವರ ವರ್ತನೆ ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದೆ. ಭವಿಷ್ಯದಲ್ಲಿ ಇಂತಹ ವ್ಯವಸ್ಥೆಯನ್ನು ಸರಿ ಮಾಡುವುದು ಕಷ್ಟ ಇದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.</p>.<p><strong>ಯಾರಿಗೂ ಬಹುಮತವಿಲ್ಲ:</strong> ‘ಇಂದಿನ ಸನ್ನಿವೇಶ ಗಮನಿಸಿದರೆ ನಮ್ಮನ್ನೂ ಸೇರಿಸಿಕೊಂಡು ಯಾರಿಗೂ ಸ್ಪಷ್ಟ ಬಹುಮತ ಬರುವುದಿಲ್ಲ ಆದಾಗ್ಯೂ ಏಪ್ರಿಲ್ 30ರವರೆಗೆ ಏನನ್ನೂ ಹೇಳಲು ಆಗುವುದಿಲ್ಲ’ ಎಂದರು.</p>.<p>ಸಿದ್ದರಾಮಯ್ಯಗೆ ಹಳೆ ಅಭ್ಯಾಸ : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗಳಲ್ಲಿ ಮತ್ತೊಬ್ಬರ ಮೇಲೆ ಕೈಮಾಡುವ ಪ್ರವೃತ್ತಿ ಹೊಂದಿದ ಮನುಷ್ಯ. ಈ ಹಿಂದೆ ಅನೇಕ ಬಾರಿ ನಾನೇ ಅವರನ್ನು ಆ ರೀತಿ ವರ್ತಿಸಿದಂತೆ ತಡೆದಿದ್ದೆ. ಈಗಲೂ ಅವರು ಅದೇ ರೀತಿಯ ಆಕ್ರೋಶ ವರ್ತನೆ ಪ್ರದರ್ಶಿಸುತ್ತಾರೆ’ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದರು.</p>.<p>‘ಕೆ.ಎಚ್.ಶ್ರೀನಿವಾಸ್ ಅವರನ್ನು ಶಿವಮೊಗ್ಗದಲ್ಲಿ ಒಂದು ಬಾರಿ ಜಾತಿ ಹೆಸರು ಹಿಡಿದು ನಿಂದಿಸುತ್ತಾ ಅವರಿಗೆ ಹೊಡೆಯಲು ಹೋಗಿದ್ದರು. ಆಗ ನಾನೇ ತಡೆದಿದ್ದೆ’ ಎಂದು ಸ್ಮರಿಸಿಕೊಂಡರು.</p>.<p><strong>17ರಂದು ವಕೀಲರ ಸಮಾವೇಶ :</strong> ಇದೇ 17ರಂದು ನಗರದ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ವಕೀಲರ ಸಮಾವೇಶ ನಡೆಯಲಿದೆ ಎಂದು ರಾಜ್ಯ ಜೆಡಿಎಸ್ನ ಯುವ ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದರು.</p>.<p>‘ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಈ ಸಮಾವೇಶದಲ್ಲಿ ಸಲಹೆ ಸೂಚನೆ ಪಡೆಯಲಾಗುವುದು’ ಎಂದರು.</p>.<p><strong>‘ಕೊಡಲು ನನ್ನ ಬಳಿ ಏನೂ ಇಲ್ಲ...!’</strong><br /> ‘ಯಾರಿಗೂ ಏನೂ ಕೊಡೊ ಶಕ್ತಿ ಇಲ್ಲ. ನಿಮ್ಮ ಮಾಲೀಕರಿಗೆ ಕೊಡಲೂ ನನ್ನ ಬಳಿ ಶಕ್ತಿ ಇಲ್ಲ. ಬೇಜಾರು ಮಾಡ್ಕೊಬೇಡಿ. ಕಾಫಿ ಕುಡ್ಕೊಂಡು ಹೋಗ್ರಪ್ಪಾ...’</p>.<p>ಜೆಡಿಎಸ್ನ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ರೀತಿ ಹೇಳಿದ ದೇವೇಗೌಡ ‘ನಿಮ್ಮ ಸಹಕಾರ ಇಲ್ಲದೇ ನಾನು ಏನೂ ಮಾಡಲು ಆಗುವುದಿಲ್ಲ’ ಎಂದರು!</p>.<p>‘ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಚಿಕ್ಕಬಳ್ಳಾಪುರದಿಂದ ಒಂದೈವತ್ತು ಜನ ಕಾಂಗ್ರೆಸ್ನವರು ಜೆಡಿಎಸ್ ಸೇರಲು ಬರ್ತಿದ್ದಾರೆ. ಸ್ವಲ್ಪ ಇರಿ. ನೋಡ್ಕೊಂಡು ಹೋಗಿ’ ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ 45 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದರು.</p>.<p><strong>ದೇವೇಗೌಡರ ಕಾರು ತಡೆದು ಪ್ರತಿಭಟನೆ<br /> ಬೆಂಗಳೂರು:</strong> ‘ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕು’ ಎಂದು ಒತ್ತಾಯಿಸಿ ‘ಪ್ರಜ್ವಲ್ ಬ್ರಿಗೇಡ್’ ಕಾರ್ಯಕರ್ತರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಕಾರಿಗೆ ಶನಿವಾರ ತಡೆ ಒಡ್ಡಿದರು. ಪದ್ಮನಾಭ ನಗರದ ನಿವಾಸದಿಂದ ಹೊರ ಹೋಗದಂತೆ ಅಡ್ಡಿಪಡಿಸಿದರು.</p>.<p>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರೂ ಸೇರಿದಂತೆ ನೂರಾರು ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>.<p>‘ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೊತೆ ಕೈ ಜೋಡಿಸಿದ್ದೀರಿ ಎಂಬ ಮಾತಿದೆ. ಹೀಗಾಗದಂತೆ ನೋಡಿಕೊಳ್ಳಿ. ಡಮ್ಮಿ ಅಭ್ಯರ್ಥಿ ಹಾಕಿ ಕಾಂಗ್ರೆಸ್ನ ಮುನಿರತ್ನ ಗೆಲ್ಲುವಂತೆ ಮಾಡಿದರೆ ಸುಮ್ಮನಿರೋದಿಲ್ಲ’ ಎಂದು ಎಚ್ಚರಿಸಿದರು.</p>.<p>ಬಿಬಿಎಂಪಿ ಸದಸ್ಯೆ ಮಂಜುಳಾ ಪತಿ ಲಗ್ಗೆರೆ ನಾರಾಯಣ ಸ್ವಾಮಿ ಮಾತನಾಡಿ, ‘ಪ್ರಜ್ವಲ್ಗೆ ಟಿಕೆಟ್ ಕೊಡಲೇಬೇಕು. ಇಲ್ಲದಿದ್ದರೆ ಇಲ್ಲೇ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದರು.</p>.<p>‘ಇದೇ 13 ರಂದು ಆರ್.ಆರ್.ನಗರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಜ್ವಲ್ ಹೆಸರು ಘೋಷಿಸಬೇಕೆಂದು ಆಗ್ರಹಿಸಿದರು. ಆದರೆ ದೇವೇಗೌಡರು ಇದ್ಯಾವುದಕ್ಕೂ ಪ್ರತಿಕ್ರಿಯಿಸದೆ ಕಾರಿನಲ್ಲಿ ಹೊರಟು ಹೋದರು.</p>.<p>‘ನೀತಿ ಸಂಹಿತೆ ಇದೆ ಗಲಾಟೆ ಮಾಡಬೇಡಿ’ ಎಂದು ಪೊಲೀಸರು ಅವರನ್ನು ಸಮಾಧಾನ ಪಡಿಸಿ ಅಲ್ಲಿಂದ ಕಳುಹಿಸಿದರು. ದೇವೇಗೌಡರು ಹೊರಟ ನಂತರವೂ ಅಭಿಮಾನಿಗಳು ಸ್ವಲ್ಪ ಹೊತ್ತು ಪ್ರತಿಭಟನೆ ಮುಂದುವರಿಸಿ ನಂತರ ಚದುರಿದರು.</p>.<p>ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬುದನ್ನು ಇದೇ 13 ರಂದು ಪ್ರಕಟಿಸುವುದಾಗಿ ದೇವೇಗೌಡ ಈಗಾಗಲೇ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>