ಕೊಲ್ಲೂರು ದೇವಸ್ಥಾನದಲ್ಲಿ ಮಂಗಳವಾರ ಎಂದಿನಿಂತೆ ಕಟ್ಟಕಟ್ಟಲೆ ಪೂಜೆಗಳು ನಡೆಯಲಿದ್ದು, ರಾತ್ರಿ ಗರ್ಭಗುಡಿ ಮುಚ್ಚಲಾಗುತ್ತದೆ. ಬಳಿಕ ಗ್ರಹಣ ಕಾಲದಲ್ಲಿ ಗರ್ಭಗುಡಿ ತೆರೆದು ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಈ ಸಂದರ್ಭ ದೇಗುಲದೊಳಗೆ ಭಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ದೇಗುಲದ ಅರ್ಚಕ ಗೋವಿಂದ ಅಡಿಗರು ತಿಳಿಸಿದ್ದಾರೆ.