ತಹಶೀಲ್ದಾರ್ ಮೇಘನಾ ರಾಷ್ಟ್ರ ಧ್ವಜ, ಪರಿಷತ್ ಹೋಬಳಿ ಕಾರ್ಯಾಧ್ಯಕ್ಷ ಯಲಗುಂದ ರಮೇಶ್ ಅವರು ಪರಿಷತ್ತಿನ ಧ್ವಜ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಒ. ಮಹಾಂತಪ್ಪ ನಾಡ ಧ್ವಜಾರೋಹಣ ಮಾಡಲಿದ್ದಾರೆ. ಬೆಳಗ್ಗೆ 8.30ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಘಾಟನೆ ನೆರವೇರಿಸವರು. ಶಾಸಕ ಪ್ರೀತಂ ಜೆ. ಗೌಡ ಅಧ್ಯಕ್ಷತೆ ವಹಿಸಲಿದ್ದು, ಸಿಡ್ಲಕೋಣ ವಾಲ್ಮೀಕಿ ಸಂಜಯ್ ಕುಮಾರ ಸ್ವಾಮೀಜಿ ಭಾಗವಹಿಸುವರು ಎಂದು ತಿಳಿಸಿದರು.
ಮಧ್ಯಾಹ್ನ 2 ಗಂಟೆಗೆ ಪರಿಸರ ವಿಚಾರ ಗೋಷ್ಠಿ ನಡೆಯಲಿದೆ. ವೃಕ್ಷಾಧಾರಿತ ಕೃಷಿ ಮತ್ತು ರೈತರ ಆರ್ಥಿಕ ಸಬಲತೆ ವಿಚಾರ ಕುರಿತು ಕಾರೆಕೆರೆ ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಶಿವಮೂರ್ತಿ ಭೈರಪ್ಪನವರ್ ಹಾಗೂ ಗಿಡ ಮೂಲಿಕೆಗಳಿಂದ ಆರೋಗ್ಯ ಸಂವರ್ಧನೆ ವಿಚಾರವಾಗಿ ಎಸ್ಡಿಎಂ ಕಾಲೇಜಿನ ಆಯುರ್ವೇದ ವೈದ್ಯೆ ಡಾ. ಎ.ಜೆ. ಅಶ್ವಿನಿ ವಿಚಾರ ಮಂಡಿಸವರು. ಎಚ್.ಎಲ್. ನಾಗರಾಜ್ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.