ವಿದ್ವಾನ್ ಉಮಾಕಾಂತ್ ಭಟ್ ಮಾತನಾಡಿ, ‘ಇವತ್ತು ಮನೆಯಲ್ಲಿ ದೇವರ ಪೂಜೆ ಮಾಡುವುದಕ್ಕೂ ಎಲ್ಲರಿಗೂ ಆಲಸ್ಯ ಪ್ರಾರಂಭವಾಗಿ ಬಿಟ್ಟಿದೆ. ಮನೆಯಲ್ಲಿ ನಾಲ್ಕು ಜನ ಮಕ್ಕಳಿದ್ದರೆ, ಯಾರೊಬ್ಬರೂ ಪೂಜೆ ಮಾಡುವುದಿಲ್ಲ. ಕೊನೆಗೆ ಮನೆಯ ಕೊನೇ ಮಗ, ಉಪನಯನ ಆಗದ, ದೇವರ ಬಗ್ಗೆ ಕಲ್ಪನೆಗಳಿಲ್ಲದ, ಶ್ರದ್ಧೆ ಇಲ್ಲದವ ದೇವರ ಪೂಜೆ ಮಾಡುವಂತಾಗಿದೆ. ವಿಶ್ವವೇ ನಮ್ಮನ್ನು ಯೋಗ್ಯರು ಎಂದು ಸಂಬೋಧಿಸುತ್ತಾರೆ. ಆದರೆ, ನಾವು ಹಾಗೆ ಕರೆಯಿಸಿಕೊಳ್ಳಲು ಯೋಗ್ಯರೇ ಎಂಬುದನ್ನು ಅರಿಯಬೇಕು ಎಂದು ಅಭಿಪ್ರಾಯಪಟ್ಟರು.