ಬೆಂಗಳೂರಿನ ವ್ಯಕ್ತಿಯೊಬ್ಬರು ನಗದು ಇದ್ದ ಸೂಟ್ಕೇಸ್ ನೀಡಿದ್ದು, ಅದನ್ನು ರಥಬೀದಿಯಲ್ಲಿ ಸಂಪರ್ಕಿಸುವ ವ್ಯಕ್ತಿಗೆ ತಲುಪಿಸುವಂತೆ ಸೂಚಿಸಿದ್ದರು ಎಂದಷ್ಟೇ ಉತ್ತರ ನೀಡಿದ್ದಾನೆ. ಹವಾಲಾ ಮೂಲಕ ಚಿನ್ನದ ವ್ಯಾಪಾರಿಗೆ ಹಣ ತಲುಪಿಸಲು ಆತ ನಿಯೋಜನೆಗೊಂಡಿರಬಹುದು ಎಂಬ ಶಂಕೆ ತನಿಖಾ ತಂಡಕ್ಕೆ ವ್ಯಕ್ತವಾಗಿದೆ. ಮಂಗಳೂರು ಉತ್ತರ (ಬಂದರು) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು, ಮಂಜುನಾಥ್ನನ್ನು ಬಂಧಿಸಲಾಗಿದೆ.