ರಾಜ್ಯ ಸರ್ಕಾರಕ್ಕೆಬೆಂಬಲ ನೀಡುವು ದಾಗಿಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರೇನು ಹೇಳುವುದು, ನಾನೇ ಹೇಳುತ್ತಿದ್ದೇನೆ. ಯಡಿಯೂರಪ್ಪ ಅವರೇ ಅಧಿಕಾರ ಪೂರ್ಣಗೊಳಿಸಲಿ. ಬೇಡ ಎಂದು ಹೇಳುವುದಿಲ್ಲ. ಯಾರು ಆಡಳಿತ ನಡೆಸಿದರೂ ನನಗೇನೂ ಆಗಬೇಕಿಲ್ಲ. ಆದರೆ ನಾಳೆಯೇ ಚುನಾವಣೆ ನಡೆದರೆ 224 ಕ್ಷೇತ್ರಗಳಲ್ಲೂ ಗೆಲ್ಲುವ ಶಕ್ತಿ ನಮಗಿಲ್ಲ. ಮತ್ತಷ್ಟು ಸಮಯ ಸಿಕ್ಕರೆ ಪಕ್ಷ ಸಂಘಟಿಸಲು ಸಹಕಾರಿಯಾಗುತ್ತದೆ. ಹಾಗಾಗಿ ಸದ್ಯಕ್ಕೆ ಚುನಾವಣೆ ಬೇಡ ಎಂಬುದು ನಮ್ಮ ಭಾವನೆ’ ಎಂದರು.