ರೈತರ ಸಾಲಮನ್ನಾ ಪಾಪದ ಕೆಲಸ ಎಂದು ಹೇಳಿಕೆ ವಿರುದ್ಧ ಸಿಡಿದೆದ್ದ ಕುಮಾರಸ್ವಾಮಿ, ‘ಹಾಲು ಉತ್ಪಾದಕ ಗ್ರಾಮೀಣ ಮಹಿಳೆಯರಿಗೆ ಸಬ್ಸಿಡಿಗೆ ನೀಡಲು ಸುಮಾರು ₹2,500 ಕೋಟಿ ನೀಡಲಾಗುತ್ತಿದೆ. ಸರ್ಕಾರದಿಂದ ಅಭಿವೃದ್ಧಿಗಾಗಿ, ಯೋಜನೆಗಳಿಗೆ ಸಾಕಷ್ಟು ಹಣ ವ್ಯಯ ಮಾಡಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ರಾಜ್ಯದ ಕರ್ನಾಟಕ ಆರೋಗ್ಯ ಮುಂತಾದ ಯೋಜನೆಗಳನ್ನು ವಿಲೀನಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರದ ಪಾಲು ಅಧಿಕವಾಗಿದೆ. ಆದರೆ, ಮೋದಿಯವರ ಆಯುಷ್ಮಾನ್ ಭಾರತ ಯೋಜನೆ ಎಂದು ಪ್ರಚಾರ ನೀಡುತ್ತಿದ್ದಾರೆ. ದುಡ್ಡು ರಾಜ್ಯ ಸರ್ಕಾರದ್ದು, ಹೆಸರು ಮಾತ್ರ ಮೋದಿ ಅವರದ್ದು ಎನ್ನುವಂತಾಗಿದೆ' ಎಂದರು.
‘ಮೋದಿಯವರ ಪೊಳ್ಳು ಭಾಷಣಗಳಿಗೆ ಕನ್ನಡಿಗರು ಮರುಳಾಗಬಾರದು’ ಎಂದು ಹೇಳಿದರು.