‘ಸಮ್ಮಿಶ್ರ ಸರ್ಕಾರ ಉರುಳುತ್ತದೆ ಎಂದು ಬಿಜೆಪಿ ಕಾಯುತ್ತಿದೆ. ಸಂಕ್ರಾಂತಿ, ಅಧಿವೇಶನ, ಹುಣ್ಣಿಮೆ, ಅಮವಾಸ್ಯೆ ಗಡುವು ಮುಕ್ತಾಯವಾಗಿವೆ. ಲೋಕಸಭಾ ಚುನಾವಣೆಯ ಬಳಿಕ ಸರ್ಕಾರ ಕೆಡವುತ್ತೇವೆ ಎಂಬ ಹೊಸ ವರಸೆ ಶುರುವಾಗಿದೆ. ಉಮೇಶ ಜಾಧವ ಹೊರತುಪಡಿಸಿ ಯಾವೊಬ್ಬ ಶಾಸಕರೂ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ. ಸರ್ಕಾರ ಕೂಡ ಬೀಳುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.