'ಲಾಕ್ಡೌನ್ ವೇಳೆ ಹಾಪ್ಕಾಮ್ಸ್ ಜವಾಬ್ದಾರಿ ಮಹತ್ತರವಾದುದು. ಮಳಿಗೆಗಳಲ್ಲಿ ಕೇವಲ ಮಾರಾಟ ಮಾಡಿದರೆ ಸಾಲದು. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಹಣ್ಣು, ತರಕಾರಿ, ಮೊಟ್ಟೆ ಎಲ್ಲವೂ ಸುಲಭವಾಗಿ ಸಿಗುವಂತಾಗಬೇಕು. ನಗರದ ಎಲ್ಲ ಬಡಾವಣೆಗಳಿಗೆ ವಾಹನಗಳಲ್ಲಿ ತೆರಳಿ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಬೇಕು. ರೈತರು ಬೆಳೆದ ಬೆಳೆಯನ್ನು ರಸ್ತೆಬದಿ ಬಿಸಾಡುವಂತಾಗಬಾರದು. ರೈತರಿಂದ ಹಣ್ಣು-ತರಕಾರಿ ಖರೀದಿಸಿ, ಮಳಿಗೆಗಳಲ್ಲಿ ಸಾಕಷ್ಟು ಪೂರೈಕೆ ಇರುವಂತೆ ಎಚ್ಚರ ವಹಿಸಬೇಕು' ಎಂದು ಸೂಚಿಸಿದರು.