<p><strong>ಬೆಂಗಳೂರು:</strong> ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ–2’ ಚಂದ್ರನ ಅಂಗಳಕ್ಕೆ ತಲುಪುವಲ್ಲಿ ಶುಕ್ರವಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.</p>.<p>ಲ್ಯಾಂಡರ್ ಮತ್ತು ರೋವರ್ ಅನ್ನು ಹೊತ್ತಿರುವ ಬಾಹ್ಯಾಕಾಶ ನೌಕೆ ‘ಬಾಹುಬಲಿ’ಯನ್ನು ಮತ್ತೊಂದು ಹಂತದ ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. ಇದರಿಂದ ನೌಕೆಯು ಚಂದ್ರನಿಗೆ ಇನ್ನಷ್ಟು ಸನಿಹವಾಗಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಇಸ್ರೊ ಟ್ವಿಟ್ ಮಾಡಿದೆ.</p>.<p>ಶುಕ್ರವಾರ ಮಧ್ಯಾಹ್ನ 3.27 ಕ್ಕೆ ಸರಿಯಾಗಿ 646 ಸೆಕೆಂಡುಗಳ ಕಾಲ ಎಂಜಿನ್ ಆನ್ ಮಾಡಿ ನೌಕೆಯನ್ನು ಮುಂದೂಡುವ ಮೂಲಕ ನಾಲ್ಕನೇ ಬಾರಿ ಕಕ್ಷೆಯನ್ನು ಹೆಚ್ಚಿಸುವ ಕಾರ್ಯ ನಡೆಯಿತು. ಭೂಮಿಯಿಂದ 277 x 89,472 ಕಿ.ಮೀ ದೂರಕ್ಕೆ ಸಾಗಿದೆ. ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ ಎಂದು ಇಸ್ರೊ ತಿಳಿಸಿದೆ.</p>.<p>ಜುಲೈ 22 ರಂದು ಚಂದ್ರಯಾನ–2 ನೌಕೆಯನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗಿತ್ತು. ಸೆಪ್ಟಂಬರ್ 7 ರಂದು ಚಂದ್ರನ ಮೇಲ್ಮೈ ತಲುಪಲಿದೆ. ಆಗಸ್ಟ್ 20 ರಂದು ಭೂಕಕ್ಷೆಯಿಂದ ಚಂದ್ರನ ಕಕ್ಷೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ.</p>.<p>ನೌಕೆ ಚಂದ್ರನ ಕಕ್ಷೆ ಸೇರುತ್ತಿದಂತೆ ಮಹತ್ವದ ಚಟುವಟಿಕೆಗಳು ಆರಂಭಗೊಳ್ಳಲಿವೆ. ಇದು ಅತ್ಯಂತ ಕುತೂಹಲದ ವಿದ್ಯಮಾನ ಎಂದು ಇಸ್ರೋ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ–2’ ಚಂದ್ರನ ಅಂಗಳಕ್ಕೆ ತಲುಪುವಲ್ಲಿ ಶುಕ್ರವಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.</p>.<p>ಲ್ಯಾಂಡರ್ ಮತ್ತು ರೋವರ್ ಅನ್ನು ಹೊತ್ತಿರುವ ಬಾಹ್ಯಾಕಾಶ ನೌಕೆ ‘ಬಾಹುಬಲಿ’ಯನ್ನು ಮತ್ತೊಂದು ಹಂತದ ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. ಇದರಿಂದ ನೌಕೆಯು ಚಂದ್ರನಿಗೆ ಇನ್ನಷ್ಟು ಸನಿಹವಾಗಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಇಸ್ರೊ ಟ್ವಿಟ್ ಮಾಡಿದೆ.</p>.<p>ಶುಕ್ರವಾರ ಮಧ್ಯಾಹ್ನ 3.27 ಕ್ಕೆ ಸರಿಯಾಗಿ 646 ಸೆಕೆಂಡುಗಳ ಕಾಲ ಎಂಜಿನ್ ಆನ್ ಮಾಡಿ ನೌಕೆಯನ್ನು ಮುಂದೂಡುವ ಮೂಲಕ ನಾಲ್ಕನೇ ಬಾರಿ ಕಕ್ಷೆಯನ್ನು ಹೆಚ್ಚಿಸುವ ಕಾರ್ಯ ನಡೆಯಿತು. ಭೂಮಿಯಿಂದ 277 x 89,472 ಕಿ.ಮೀ ದೂರಕ್ಕೆ ಸಾಗಿದೆ. ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ ಎಂದು ಇಸ್ರೊ ತಿಳಿಸಿದೆ.</p>.<p>ಜುಲೈ 22 ರಂದು ಚಂದ್ರಯಾನ–2 ನೌಕೆಯನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗಿತ್ತು. ಸೆಪ್ಟಂಬರ್ 7 ರಂದು ಚಂದ್ರನ ಮೇಲ್ಮೈ ತಲುಪಲಿದೆ. ಆಗಸ್ಟ್ 20 ರಂದು ಭೂಕಕ್ಷೆಯಿಂದ ಚಂದ್ರನ ಕಕ್ಷೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ.</p>.<p>ನೌಕೆ ಚಂದ್ರನ ಕಕ್ಷೆ ಸೇರುತ್ತಿದಂತೆ ಮಹತ್ವದ ಚಟುವಟಿಕೆಗಳು ಆರಂಭಗೊಳ್ಳಲಿವೆ. ಇದು ಅತ್ಯಂತ ಕುತೂಹಲದ ವಿದ್ಯಮಾನ ಎಂದು ಇಸ್ರೋ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>