ಹುಬ್ಬಳ್ಳಿ: ‘ಕಾಣೆಯಾಗಿರುವ ರಾಜ್ಯದ ಮೀನುಗಾರರ ಪತ್ತೆಗಾಗಿ ಇಸ್ರೊ ನೆರವು ಕೋರಲಾಗಿದೆ. ಮಹಾರಾಷ್ಟ್ರದ ಕರಾವಳಿಯನ್ನು ಪ್ರವೇಶಿಸಿದ ರಾಜ್ಯದ ಮೀನುಗಾರರನ್ನು ಅಲ್ಲಿಯ ಮೀನುಗಾರರು ಅಪಹರಣ ಮಾಡಿ, ರತ್ನಗಿರಿ, ಸಿಂಧುದುರ್ಗದಲ್ಲಿ ಇರಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆದಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.