<p><strong>ಬೆಂಗಳೂರು:</strong> ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಪ್ರಧಾನ ಮಂತ್ರಿ ನರೇಂದ್ರಮೋದಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರಾಜ್ಯ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.</p>.<p>ಕೋವಿಡ್–19ಕ್ಕೆ ಈಡಾದವರ ಒಂದೇ ಒಂದು ಪ್ರಕರಣ ರಾಜ್ಯದಲ್ಲಿ ಶುಕ್ರವಾರ ಪತ್ತೆಯಾಗದಿರುವುದು ಹಾಗೂ ಓರ್ವ ಸೋಂಕಿತ ಗುಣಮುಖನಾಗಿ ಮನೆ ಸೇರಿರುವುದು ಸಮಾಧಾನ ತಂದಂತಾಗಿದೆ.</p>.<p>‘ಜನತಾ ಕರ್ಫ್ಯೂ’ಗೆ ರಾಜ್ಯದ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಅಂದು ತಮ್ಮ ಎಲ್ಲ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿವೆ. ಬಹುತೇಕರು ಅಂದು ಇಡೀ ದಿನ ಮನೆಯಲ್ಲೇ ಇರುವುದಾಗಿ ಘೋಷಿಸಿದ್ದಾರೆ.</p>.<p>ಆಸ್ಪತ್ರೆಗಳು, ಔಷಧ ಮಳಿಗೆ, ಅಗ್ನಿಶಾಮಕ ದಳ ಸೇರಿ ತುರ್ತು ಸೇವೆಗಳು ಮಾತ್ರ ಅಂದು ಲಭ್ಯವಾಗಲಿವೆ. ಹಾಲು, ಪತ್ರಿಕೆ ಸರಬರಾಜು ಎಂದಿನಂತೆ ಇರಲಿದೆ.ತರಕಾರಿ, ಹಣ್ಣು ಸೇರಿದಂತೆ ಬಹುತೇಕ ವಸ್ತುಗಳ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಲಿವೆ.</p>.<p>ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬಿಎಂಟಿಸಿ ಬಸ್ಗಳು ಅಂದು ಬೆಳಿಗ್ಗೆ ಎಂದಿನಂತೆ ಸಂಚರಿಸಲಿವೆ. ಪ್ರಯಾಣಿಕರು ಅನಿವಾರ್ಯ ಸಂದರ್ಭಗಳಲ್ಲಿ ಸಂಚಾರ ಮಾಡಬೇಕಾದಲ್ಲಿ ಮಾತ್ರ ಈ ಎರಡು ಸಂಸ್ಥೆಗಳ ಸೇವೆ ಲಭ್ಯ ಇರಲಿದೆ.</p>.<p>ಬೆಳಿಗ್ಗೆಯಿಂದಲೇ ಮೆಟ್ರೊ ರೈಲು ಸಂಚಾರವನ್ನೂ ಸ್ಥಗಿತಗೊಳಿಸುವುದಾಗಿ ಬೆಂಗಳೂರು ಮೆಟ್ರೊ (ಬಿಎಂಆರ್ಸಿಎಲ್) ಹೇಳಿದೆ. ಆಟೊ, ಓಲಾ ಹಾಗೂ ಉಬರ್ ಸೇರಿ ವಿವಿಧ ಕಂಪನಿ ಕ್ಯಾಬ್ಗಳು ಅಂದು ರಸ್ತೆಗೆ ಇಳಿಯುವುದಿಲ್ಲ. ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಸಹ ಬಂದ್ ಆಗಲಿದೆ.</p>.<p>ರಾಜ್ಯದ ಪೆಟ್ರೋಲ್ ಹಾಗೂ ಡೀಸೆಲ್ ಬಂಕ್ಗಳ ಮಾಲೀಕರು ಬಂದ್ಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ತೈಲ ಅಗತ್ಯವಾಗಿರುವುದರಿಂದ ಅಂದು ಬಂಕ್ಗಳು ಯಥಾಪ್ರಕಾರ ತೆರೆದಿರಲಿವೆ. ಆದರೆ, ಸಿಬ್ಬಂದಿ ಬಂಕ್ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ.</p>.<p><strong>ಹೊಟೇಲ್ನಲ್ಲಿ ಪಾರ್ಸೆಲ್ ಮಾತ್ರ</strong></p>.<p>ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಹೋಟೆಲ್ಗಳು ಶನಿವಾರದಿಂದ ಮಾರ್ಚ್ 31 ರವರೆಗೆ ತಮ್ಮ ಪಾಕಶಾಲೆಯನ್ನು ಮಾತ್ರ ತೆರೆಯಬೇಕು ಮತ್ತು ಪಾರ್ಸೆಲ್ ಒಯ್ಯಲು ಅವಕಾಶ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.</p>.<p>ಪಬ್ ಮತ್ತು ಕ್ಲಬ್ಗಳಿಗೆ ಇದ್ದ ನಿರ್ಬಂಧವನ್ನು ಬಾರ್ಗಳಿಗೂ ವಿಸ್ತರಿಸಲಾಗಿದೆ. ಮದ್ಯದಂಗಡಿಗಳು ಮಾತ್ರ ತೆರೆಯಲಿದ್ದು, ಮದ್ಯವನ್ನು ಮನೆಗೆ ಒಯ್ಯಲು ಅವಕಾಶವಿದೆ.</p>.<p>ಅಡುಗೆ ಮನೆ ಹೊರಗೆ ಇರುವ ಸಣ್ಣ ಕ್ಯಾಂಟಿನ್ಗಳು ಕಾರ್ಯ ನಿರ್ವಹಿಸಬಹುದು. ನಿಂತು ತಿನ್ನುವ ವ್ಯವಸ್ಥೆ ಇರುವ ‘ದರ್ಶಿನಿ’ ಗಳಲ್ಲಿ ವ್ಯಕ್ತಿಗಳ ನಡುವೆ ಆರು ಅಡಿಗಳಷ್ಟು ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.</p>.<p><strong>ವಿಮಾನಗಳಿಗೆ ನಿಷೇಧ</strong></p>.<p>‘ಮಾ.23 ರಿಂದ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ರಾಜ್ಯಕ್ಕೆ ಬರುವುದಿಲ್ಲ. 22ರ ಮಧ್ಯರಾತ್ರಿ 1 ಗಂಟೆಗೆ ಮೊದಲು ಬರುವ ವಿಮಾನಗಳಿಗೆ ಇಳಿಯಲು ಅವಕಾಶ ನೀಡಲಾಗುವುದು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.</p>.<p>ದೇಶದೊಳಗೆ ಸಂಚರಿಸುವ ವಿಮಾನಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಸೂಚನೆ ನೀಡಿದರೂ ಅದನ್ನು ಪಾಲಿಸಲಾಗುವುದು ಎಂದವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಪ್ರಧಾನ ಮಂತ್ರಿ ನರೇಂದ್ರಮೋದಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರಾಜ್ಯ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.</p>.<p>ಕೋವಿಡ್–19ಕ್ಕೆ ಈಡಾದವರ ಒಂದೇ ಒಂದು ಪ್ರಕರಣ ರಾಜ್ಯದಲ್ಲಿ ಶುಕ್ರವಾರ ಪತ್ತೆಯಾಗದಿರುವುದು ಹಾಗೂ ಓರ್ವ ಸೋಂಕಿತ ಗುಣಮುಖನಾಗಿ ಮನೆ ಸೇರಿರುವುದು ಸಮಾಧಾನ ತಂದಂತಾಗಿದೆ.</p>.<p>‘ಜನತಾ ಕರ್ಫ್ಯೂ’ಗೆ ರಾಜ್ಯದ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಅಂದು ತಮ್ಮ ಎಲ್ಲ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿವೆ. ಬಹುತೇಕರು ಅಂದು ಇಡೀ ದಿನ ಮನೆಯಲ್ಲೇ ಇರುವುದಾಗಿ ಘೋಷಿಸಿದ್ದಾರೆ.</p>.<p>ಆಸ್ಪತ್ರೆಗಳು, ಔಷಧ ಮಳಿಗೆ, ಅಗ್ನಿಶಾಮಕ ದಳ ಸೇರಿ ತುರ್ತು ಸೇವೆಗಳು ಮಾತ್ರ ಅಂದು ಲಭ್ಯವಾಗಲಿವೆ. ಹಾಲು, ಪತ್ರಿಕೆ ಸರಬರಾಜು ಎಂದಿನಂತೆ ಇರಲಿದೆ.ತರಕಾರಿ, ಹಣ್ಣು ಸೇರಿದಂತೆ ಬಹುತೇಕ ವಸ್ತುಗಳ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಲಿವೆ.</p>.<p>ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬಿಎಂಟಿಸಿ ಬಸ್ಗಳು ಅಂದು ಬೆಳಿಗ್ಗೆ ಎಂದಿನಂತೆ ಸಂಚರಿಸಲಿವೆ. ಪ್ರಯಾಣಿಕರು ಅನಿವಾರ್ಯ ಸಂದರ್ಭಗಳಲ್ಲಿ ಸಂಚಾರ ಮಾಡಬೇಕಾದಲ್ಲಿ ಮಾತ್ರ ಈ ಎರಡು ಸಂಸ್ಥೆಗಳ ಸೇವೆ ಲಭ್ಯ ಇರಲಿದೆ.</p>.<p>ಬೆಳಿಗ್ಗೆಯಿಂದಲೇ ಮೆಟ್ರೊ ರೈಲು ಸಂಚಾರವನ್ನೂ ಸ್ಥಗಿತಗೊಳಿಸುವುದಾಗಿ ಬೆಂಗಳೂರು ಮೆಟ್ರೊ (ಬಿಎಂಆರ್ಸಿಎಲ್) ಹೇಳಿದೆ. ಆಟೊ, ಓಲಾ ಹಾಗೂ ಉಬರ್ ಸೇರಿ ವಿವಿಧ ಕಂಪನಿ ಕ್ಯಾಬ್ಗಳು ಅಂದು ರಸ್ತೆಗೆ ಇಳಿಯುವುದಿಲ್ಲ. ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಸಹ ಬಂದ್ ಆಗಲಿದೆ.</p>.<p>ರಾಜ್ಯದ ಪೆಟ್ರೋಲ್ ಹಾಗೂ ಡೀಸೆಲ್ ಬಂಕ್ಗಳ ಮಾಲೀಕರು ಬಂದ್ಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ತೈಲ ಅಗತ್ಯವಾಗಿರುವುದರಿಂದ ಅಂದು ಬಂಕ್ಗಳು ಯಥಾಪ್ರಕಾರ ತೆರೆದಿರಲಿವೆ. ಆದರೆ, ಸಿಬ್ಬಂದಿ ಬಂಕ್ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ.</p>.<p><strong>ಹೊಟೇಲ್ನಲ್ಲಿ ಪಾರ್ಸೆಲ್ ಮಾತ್ರ</strong></p>.<p>ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಹೋಟೆಲ್ಗಳು ಶನಿವಾರದಿಂದ ಮಾರ್ಚ್ 31 ರವರೆಗೆ ತಮ್ಮ ಪಾಕಶಾಲೆಯನ್ನು ಮಾತ್ರ ತೆರೆಯಬೇಕು ಮತ್ತು ಪಾರ್ಸೆಲ್ ಒಯ್ಯಲು ಅವಕಾಶ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.</p>.<p>ಪಬ್ ಮತ್ತು ಕ್ಲಬ್ಗಳಿಗೆ ಇದ್ದ ನಿರ್ಬಂಧವನ್ನು ಬಾರ್ಗಳಿಗೂ ವಿಸ್ತರಿಸಲಾಗಿದೆ. ಮದ್ಯದಂಗಡಿಗಳು ಮಾತ್ರ ತೆರೆಯಲಿದ್ದು, ಮದ್ಯವನ್ನು ಮನೆಗೆ ಒಯ್ಯಲು ಅವಕಾಶವಿದೆ.</p>.<p>ಅಡುಗೆ ಮನೆ ಹೊರಗೆ ಇರುವ ಸಣ್ಣ ಕ್ಯಾಂಟಿನ್ಗಳು ಕಾರ್ಯ ನಿರ್ವಹಿಸಬಹುದು. ನಿಂತು ತಿನ್ನುವ ವ್ಯವಸ್ಥೆ ಇರುವ ‘ದರ್ಶಿನಿ’ ಗಳಲ್ಲಿ ವ್ಯಕ್ತಿಗಳ ನಡುವೆ ಆರು ಅಡಿಗಳಷ್ಟು ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.</p>.<p><strong>ವಿಮಾನಗಳಿಗೆ ನಿಷೇಧ</strong></p>.<p>‘ಮಾ.23 ರಿಂದ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ರಾಜ್ಯಕ್ಕೆ ಬರುವುದಿಲ್ಲ. 22ರ ಮಧ್ಯರಾತ್ರಿ 1 ಗಂಟೆಗೆ ಮೊದಲು ಬರುವ ವಿಮಾನಗಳಿಗೆ ಇಳಿಯಲು ಅವಕಾಶ ನೀಡಲಾಗುವುದು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.</p>.<p>ದೇಶದೊಳಗೆ ಸಂಚರಿಸುವ ವಿಮಾನಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಸೂಚನೆ ನೀಡಿದರೂ ಅದನ್ನು ಪಾಲಿಸಲಾಗುವುದು ಎಂದವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>