ಬೈಂದೂರು: ‘ಮಿಟೂ’ ಅಭಿಯಾನದ ಮೂಲಕ ಹೆಣ್ಣು ದೌರ್ಜನ್ಯವನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿದೆ. ಈ ಅಭಿಯಾನದಿಂದ ಮಹಿಳೆಯರಿಗೆ ಬಲ ಬಂದಿದೆ. ಆದರೆ, ಅಭಿಯಾನಕ್ಕೆ ಕಾನೂನಿನ ಬೆಂಬಲ ಸಿಗುವವರೆಗೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಅಭಿಪ್ರಾಯಪಟ್ಟರು.