‘ಸದನದ ಸದಸ್ಯರ ಹಕ್ಕು ರಕ್ಷಿಸುವ ಸಲುವಾಗಿ, ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೇಕು. ಇಲ್ಲಿ ಅವಕಾಶ ಸಿಗದೆ ಹೋದರೆ, ಸದಸ್ಯನಾಗಿ ಉಳಿಯಬೇಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ರಾಜ್ಯಪಾಲರು ಈ ಸಂದೇಶ ರವಾನಿಸಿದ್ದರೂ ಸದಸ್ಯರ ಮಾತಿಗೆ ಅವಕಾಶ ನೀಡಬೇಕು. ಸದಸ್ಯರು ಕಾಣೆಯಾಗುತ್ತಿರುವ ಬಗ್ಗೆ ತಿಳಿಯುತ್ತಿಲ್ಲಎಂದು ಶಾಸಕಕೃಷ್ಣ ಬೈರೇಗೌಡ ಆಗ್ರಹಿಸಿದರು.