ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಗುರುವಾರ ನಡೆದ ಪ್ರತಿಭಟನೆ ಮತ್ತು ಗೋಲಿಬಾರ್ಗೆ ಕಾಂಗ್ರೆಸ್ ಶಾಸಕಯು.ಟಿ.ಖಾದರ್ ಕಾರಣಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದಾರೆ.
‘ಜನರನ್ನು ಸಿಟ್ಟಿಗೆಬ್ಬಿಸಿದ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಮಂಗಳೂರಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಇಬ್ಬರು ಯುವಕರ ಜೀವಹಾನಿಗೆ ನೇರ ಹೊಣೆ.ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
UT Khader , Cong MLA who incited people by his extreme threats is directly responsible for loss of 2 lives n Mangaluru police firing today ... Should be booked under law ... @suvarnanewstv@tv9kannada@BJP4India
ಸಂತೋಷ್ ಅವರ ಅಭಿಪ್ರಾಯವನ್ನು ಅಭಿಮಾನಿಗಳು ಮತ್ತು ಬೆಂಬಲಿಗರು ಸ್ವಾಗತಿಸಿದ್ದಾರೆ. ಗೋಲೀಬಾರ್ನಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡಬಾರದು, ರಾಜ್ಯದಲ್ಲಿ ನಿಮ್ಮ ಸರ್ಕಾರವೇ ಇದೆ ಖಾದರ್ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ.
ಒಬ್ಬರು ಮಾತ್ರ ಸಂತೋಷ್ ಅವರ ಅಭಿಪ್ರಾಯವನ್ನು ಖಂಡಿಸಿದ್ದಾರೆ.
ಪ್ರವೀಣ್ ತೊಗಾಡಿಯ, ಮುತಾಲಿಕ್, ಪಂಪ್ ವೆಲ್ ಕಟೀಲ್ ದ್ವೇಷ ಹುಟ್ಟಿಸುವ ಭಾಷಣ ಮಾಡುವಾಗ ಎಲ್ಲಿದ್ದೆ ಸಂತೋಷ?.