ಇದಕ್ಕೆ ಮೊದಲು ಮಾತನಾಡಿದ ಸ್ವಾಮೀಜಿ,‘ನಮ್ಮ ಭಾಗದ ಹೆಸರು ಬದಲಾಯಿಸಬೇಕೆಂಬುದು ಜನರ ಆಶೋತ್ತರವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು, ಅಭಿವೃದ್ಧಿಗೆ ನೆರವಾಗಬೇಕು. ಅದೇ ರೀತಿ, ಚೆನ್ನಮ್ಮನ ಹೆಸರನ್ನು ಮಹಿಳಾ ಸಬಲೀಕರಣ ಯೋಜನೆಗಳಿಗೆ ನಾಮಕರಣ ಮಾಡುವ ಜತೆಗೆ ರಾಜಧಾನಿಯಲ್ಲಿ ಬೃಹತ್ ಭವನವನ್ನು ಸರ್ಕಾರ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.